ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಕಗ್ಗೊಲೆ

ಅಯ್ಯೋ! ಬಿಡ್ತು ಅನ್ನಿ! ಅಂಥಾ ಒಳ್ಳೆ ಕೆಲಸ ಮಾಡೋದಕ್ಕೆ ಅವರು ಕೈಯೇ ಹಾಕಿಲ್ಲ! ಇನ್ನೂ ಮುರಿಯಲು ಮುಂದಾಗಿದ್ದಾರೆ.
ಹಾಕಿ ನಡೆಸುವ ಅಸೋಸಿಯೇಷನ್ ಮಧ್ಯದಲ್ಲಿ ಒಡೆದು, ಇಬ್ಭಾಗವಾಗಿ, ಒಂದು 'ಹಾಕಿ ಇಂಡಿಯಾ', ಮತ್ತೊಂದು, 'ಇಂಡಿಯನ್ ಹಾಕಿ ಫೆಢೆರೇಷನ್' ಎಂದು ಎರಡು ಹೋಳುಗಳಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ!
ಕ್ರೀಡಾ ಸಚಿವ ಅಜಯ್ ಮಾಕನ್ ಇವರಿಬ್ಬರ ಜಗಳವನ್ನು ಪರಿಹರಿಸಿ, ಹಾಕಿಯನ್ನು ಮತ್ತೆ ಏಳಿಗೆಯ ಹಾದಿಯಲ್ಲಿ ತರುತ್ತಾರೆಂಬ ನಂಬಿಕೆ ಇಟ್ಟ ಹಾಕಿ ಆಟಗಾರರಿಗೂ ಮತ್ತು ಅಭಿಮಾನಿಗಳೀಗೆ ನಿರಾಶೆ ಉಂಟು ಮಾಡಿದೆ.
ಅದನ್ನು ಸರಿಮಾಡಲು ಮಾಕನ್ನರು ಕೈಯೇ ಹಾಕಿಲ್ಲ. ಅದನ್ನು ಬಿಟ್ಟು ಬಿಸಿಸಿಐ ಜೊತೆ 'ಆರ್ ಟಿಐ' ವಿಚಾರದಲ್ಲಿ ಯುದ್ಧಕ್ಕೆ ಇಳಿದಿದ್ದಾರೆ!
ಇವರೆಲ್ಲರಿಗೂ ಎರಡೆರಡು ಹಾಕೋಣವೇ ಅಂತ ಅನ್ಸುತ್ತೆ !
ಹಾಕಿಯಲ್ಲಿ ಏನಾಗುತ್ತಿದೆ? ಸ್ವಲ್ಪ ನೋಡೋಣ ಬನ್ನಿ. 'ಹಾಕಿ ಇಂಡಿಯ' ಕ್ರೀಡಾ ಇಲಾಖೆಗೆ ಸೇರಿದ್ದು. ಮಾಕನ್ ಕೆಳಗಿರುವ ಅಸೋಸಿಯೇಷನ್.
ಇಂಡಿಯನ್ ಹಾಕಿ ಫೆಡೆರೇಷನ್ ಮತ್ತು 'ನಿಂಬಸ್ ಸ್ಪೋರ್ಟ್ಸ್' ಸೇರಿ ಇದೇ ತಿಂಗಳಲ್ಲಿ ಭಾರತದಲ್ಲಿ ಶುರುವಾಗುವ ವರ್ಲ್ಡ್ ಸೀರಿಸ್ ಟೂರ್ನಿಮೆಂಟ್ಗೆ ಸಿದ್ಧತೆ ನಡೆಸಿದ್ದಾರೆ!
ಭಾರತದಲ್ಲಿ ಒಂಬತ್ತು ಜಾಗಗಳಲ್ಲಿ ನಡೆಯುವ - ಮುಂಬೈ, ಬೆಂಗಳೂರು, ಜಲಂಧರ್, ಪುಣೆ, ಚೆನ್ನೈ ಮತ್ತು ಹೈದರಾಬಾದ್ ನಲ್ಲಿ ಎಂಟು ಟೀಮಿರುವ ಈ 'ವರ್ಲ್ಡ್ ಕಪ್ 'ಗೆ ಸೋಜಿಗ ಸಂಗತಿಯೇನಂದರೆ, ಭಾರತದ ಹಾಕಿ ಪ್ಲೇಯರ್ ಯಾರೂ ಇದರಲ್ಲಿ ಆಡುವ ಹಾಗಿಲ್ಲ!
ಭಾರತದಲ್ಲಿ ಕ್ರಿಕೆಟ್ ವರ್ಲ್ಡ್ ಕಪ್ ನಡೆದಾಗ, ಸಚಿನ್, ಧೋಣಿ, ಜಹೀರ್ ಖಾನ್, ಯುವರಾಜ್ ಭಾರತದ ಟೀಮಿನಲ್ಲಿ ಇಲ್ದಿದ್ರೆ ಹೇಗಿರುತ್ತೆ? ಪ್ರೇಕ್ಷಕರು ಅಂತಹ ಮ್ಯಾಚ್ಗಳು ಆಡುವುದಕ್ಕೆ ಬಿಡುವರೇ?
'ಭಾರತದ ಯಾವ ಪ್ಲೇಯರ್ನೂ ಇದರಲ್ಲಿ ಪಾಲು ಗೊಳ್ಳಬಾರದು' ಎಂದು ಹಾಕಿ ಇಂಡಿಯಾದ ಕಾರ್ಯದರ್ಶಿ ನರೇಂದ್ರ ಬಾತ್ರ , ಪ್ಲೇಯರ್ಸ್ ಗಳಿಗೆ 'ವಾರ್ನ್' ಮಾಡಿದ್ದಾರೆ! ಇದರಲ್ಲಿ ಆಡಿದರೆ ಮುಂದೆ ಎಂದೂ ಭಾರತಕ್ಕೆ ಆಡುವ ಹಾಗಿಲ್ಲ ಅಂತ ಎಚ್ಚರಿಸಿದ್ದಾರೆ, ಬಾತ್ರ!
ದೇವರೇ ಕಾಪಾಡಬೇಕು, ನಮ್ಮ ದೇಶದ ಹಾಕಿಯನ್ನು.
ಒಂದು ಕಾಲದಲ್ಲಿ ನಾವು ಸತತ 30 ವರ್ಷದ ಮೇಲೆ ಒಲಿಂಪಿಕ್ಸ್ ಚಾಂಪಿಯನ್ಸ್ ಆದ ಮೇಲೆ ಈಗ ಒಬ್ಬರಿಗೊಬ್ಬರು ಗುದ್ದಾಡುತ್ತ ಹಾಕಿಯನ್ನು ಅಧೋಗತಿಗೆ ಇಳಿಸಿದ್ದೇವೆ!
ಆಜಯ ಮಾಕನ್ರು ಈ 'ಡಾಗ್ ಫೈಟ'ನ್ನು ಯಾಕೆ ಪರಿಹಾರ ಮಾಡುತ್ತಿಲ್ಲ ?
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ









Click it and Unblock the Notifications