ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಪಟ್ಟದ ಆಸೆ ಇಲ್ಲ, ರೆಡ್ಡಿ ಬ್ರದರ್ಸ್ ಕಥೆ ಕ್ಲೋಸ್

By Mahesh
|
Google Oneindia Kannada News

BS Yeddyurappa
ಬೆಂಗಳೂರು, ನ.19: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜೈಲಿನಿಂದ ಹೊರ ಬಂದ ನಂತರ ಮೊದಲಿಗಿಂತ ಹೆಚ್ಚು ಹಟವಾದಿಯಾಗಿದ್ದಾರೆ. ಆದರೆ, ತಾಳ್ಮೆಯನ್ನು ಮೈಗೂಡಿಸಿಕೊಂಡಿದ್ದು, ಪುಣ್ಯಕ್ಷೇತ್ರಗಳ ಸಂದರ್ಶನ ಮಾಡಿ, ತಮ್ಮ ಯೋಜನೆಗೆ ತಕ್ಕ ಹೆಜ್ಜೆಯನ್ನು ಇಡುತ್ತಿದ್ದಾರೆ.

ಪ್ರಶ್ನೆ: ಬಳ್ಳಾರಿ ರೆಡ್ಡಿ ಸೋದರರು ಸರ್ಕಾರಕ್ಕೆ ಮಾರಕವಾಗಬಲ್ಲರೇ?
ಯಡಿಯೂರಪ್ಪ: ಬಳ್ಳಾರಿ ಗ್ರಾಮಾಂತರ ಉಪ ಚುನಾವಣೆಯಲ್ಲಿ ರೆಡ್ಡಿಗಳ ಬೆಂಬಲ ಪಡೆದಿರುವ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಸೋಲುತ್ತಾರೆ. ಜನಾರ್ದನ ರೆಡ್ಡಿ ಇನ್ನೂ ಜೈಲಿನಲ್ಲಿದ್ದಾರೆ. ಕರುಣಾಕರ ಹಾಗೂ ಸೋಮಶೇಖರ ಪಕ್ಷದ ಪರವಾಗಿ ನಿಲ್ಲುವ ಸಾಧ್ಯತೆಯಿದೆ. ನಾನು ಸಿಎಂ ಆಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯ ಬಿಜೆಪಿಯನ್ನು ಕಾಪಾಡಲಿದೆ.

ಪ್ರಶ್ನೆ: ಮುಂದಿನ ಚುನಾವಣೆಯಲಿ ಸಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೀರಾ?
ಯಡಿಯೂರಪ್ಪ: ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಆರು ತಿಂಗಳ ನಂತರ ಸಿಎಂ ಪದವಿ ಮತ್ತೆ ಸಿಗುತ್ತದೆ ಎಂದಿದ್ದು ನಿಜ. ಆದರೆ, ಅದು ಪಕ್ಷದ ಹಿರಿಯ ನಾಯಕರು ಹೇಳಿಸಿದ್ದು, ಅವರು ಬಯಸಿದ್ದು, ನನಗೆ ಈಗ ಸಿಎಂ ಪಟ್ಟದ ಆಸೆಯಿಲ್ಲ.

ಪ್ರಶ್ನೆ: ಸಿಎಂ ಪಟ್ಟ ಸಿಗಲು ಸದಾನಂದ ಗೌಡರ ಸರ್ಕಾರ ಅಡ್ಡಿಯಾಗಿದಿಯೇ?
ಯಡಿಯೂರಪ್ಪ: ನಾನು ಸಿಎಂ ಆಗಬೇಕು ಎಂದು ಯಾವತ್ತೂ ಯಾರ ಮೇಲೂ ಒತ್ತಡ ಹೇರಲಿಲ್ಲ. ನನ್ನ ಬೆಂಬಲಿಗರಿಂದ ಸದಾನಂದ ಗೌಡರ ಸರ್ಕಾರಕ್ಕೆ ತೊಂದರೆಯಿದೆ. ಸರ್ಕಾರ ಬೀಳಲಿದೆ ಎಂಬುದು ಊಹಾಪೋಹದ ಮಾತುಗಳಷ್ಟೇ.

ಸರ್ಕಾರ ಬೀಳಿಸಬೇಕಾದರೆ, ಸರ್ಕಾರ ರಚನೆಗೂ ಮುನ್ನವೇ ಆ ಕೆಲಸ ಮಾಡಬಹುದಿತ್ತು. ರಾಜಭವನಕ್ಕೆ ನಾನು ರಾಜೀನಾಮೆ ಸಲ್ಲಿಸಲು ಹೋದಾಗ ನನ್ನ ಜೊತೆಗೆ 70 ಜನ ಶಾಸಕರು ಹಾಗೂ ಎಲ್ಲಾ ಸಂಸದರು ಬಂದಿದ್ದರು ಎಂಬುದನ್ನು ಮರೆಯುವಂತಿಲ್ಲ. ನನ್ನ ಬೆಂಬಲಿಗರನ್ನು ಸರ್ಕಾರ ಉರುಳಿಸಲು ಎಂದೂ ಬಳಸುವುದಿಲ್ಲ.

ಪ್ರಶ್ನೆ: ಪ್ರಬಲ ಲಿಂಗಾಯತ ನಾಯಕರಾಗಿ ಬೆಳೆದಿದ್ದೀರಾ ಏನ್ನನ್ನಿಸುತ್ತದೆ?
ಯಡಿಯೂರಪ್ಪ: ನಾನು ಯಾವುದೆ ಒಂದು ಸಮುದಾಯಕ್ಕೆ ಸೇರಿದವನಲ್ಲ. ಲಿಂಗಾಯತ ನಾಯಕನಾಗಿ ಜನ ನನ್ನನ್ನು ಗುರುತಿಸುವುದಿಲ್ಲ. ನಾನು ಎಲ್ಲರಿಗೂ ಸೇರಿದವನು. ಎಲ್ಲಾ ಮಠಗಳಿಗೂ ಭೇಟಿ ಕೊಡುತ್ತೇನೆ. ಮುಸ್ಲೀಮ್ ಹಾಗೂ ಕ್ರೈಸ್ತ ಬಾಂಧವರ ಕರೆಗೆ ಸದಾ ಓಗೊಡುತ್ತೇನೆ.

ಪ್ರಶ್ನೆ: ಕಡೆಯದಾಗಿ ನಿಮ್ಮನ್ನು ತುಳಿದವರು ಯಾರು?
ಯಡಿಯೂರಪ್ಪ: ಯಾರೂ ತಮ್ಮ ಕ್ಷೇತ್ರದಲ್ಲಿ ಜೀರೋಗಳಾಗಿದ್ದಾರೋ ಅವರು ದೆಹಲಿಯಲ್ಲಿ ಹೀರೋಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಮೆರೆಯುವ ಆಸೆಯಿದ್ದರೆ ಮೊದಲು ಚುನಾವಣೆ ಎದುರಿಸಿ ಗೆಲ್ಲಲಿ. ನಾನಂತೂ ಬಿಜೆಪಿಯನ್ನು ತೊರೆಯುವುದಿಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದರು.

English summary
BS Yeddyurappa has said Reddy brothers are no longer powerful, Sreeramulu will lose Bellary By election. I m not running for CM Post or place at the central team. Iam true servant of BJP and belong to all community not only Lingayats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X