Get Updates
Get notified of breaking news, exclusive insights, and must-see stories!

ಕುಮಾರಸ್ವಾಮಿ ನನ್ನ ಆತ್ಮೀಯ ಸ್ನೇಹಿತ : ಶ್ರೀರಾಮುಲು

Sriramulu
"ನಾನು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆತ್ಮೀಯ ಸ್ನೇಹಿತರು. ನನಗೆ ಈ ಮಾತು ಹೇಳಲು ಯಾವ ಮುಜುಗರವೂ ಇಲ್ಲ. ಈ ಹಿಂದೆ ಸಮ್ಮಿಶ್ರ ಅಧಿಕಾರಕ್ಕೆ ಬಂದಾಗ ನಾವಿಬ್ಬರೂ ಉತ್ತಮ ಸ್ನೇಹಿತರಾದೆವು. ಬಿಜೆಪಿ ಪಕ್ಷದಲ್ಲಿ ಕೆಲವರ ಜೊತೆ ಉತ್ತಮ ಒಡನಾಟವಿದೆ, ಕುಮಾರಸ್ವಾಮಿ ಮೇಲೆ ನನಗೆ ಪ್ರೀತಿ ವಿಶ್ವಾಸವಿದೆ" ಎಂದು ಮಾಜಿ ಸಚಿವ ಶ್ರೀರಾಮುಲು ಅಂತರಂಗವನ್ನು ಬಿಚ್ಚಿಟ್ಟಿದ್ದಾರೆ.

ಟಿವಿ9 (ಚಕ್ರವ್ಯೂಹ) ಮತ್ತು ಸುವರ್ಣ ನ್ಯೂಸ್ (ಟಾರ್ಗೆಟ್) ಭಾನುವಾರ (ನ.13) ಏಕಕಾಲದಲ್ಲಿ ಪ್ರಸಾರವಾದ ಕಾರ್ಯಕ್ರಮಗಳಲ್ಲಿ ತೆಲುಗು ಮಿಶ್ರಿತ ಕನ್ನಡ ಮಾತನಾಡುತ್ತಿದ್ದ ಶ್ರೀರಾಮುಲು, "ನಾನು ಸ್ವಾಭಿಮಾನಿ ಮನುಷ್ಯ, ನನಗೆ ಬಿಜೆಪಿಯಿಂದ ನೋವಾಗಿದೆ, ಅದಕ್ಕಾಗಿ ಪಕ್ಷವನ್ನು ತೊರೆದೆ. ದೇವರಲ್ಲಿ ನಂಬಿಕೆ ಇರುವವನು ನಾನು. ಬಡವರನ್ನು ಕಂಡರೆ ನನಗೆ ಕನಿಕರವಿದೆ. ಜನರು ಕಷ್ಟ ಎಂದು ಬಂದಾಗ ನನ್ನ ಮನೆ ಅವರಿಗೆ ಕೊಡಲೂ ನಾನು ಹಿಂದೆ ಮುಂದೆ ನೋಡುವಂಥ ಮನುಷ್ಯನಲ್ಲ" ಎಂದು ಮನದಾಳದ ಮಾತನ್ನು ಹೊರಗೆಡವಿದರು.

"ಬಳ್ಳಾರಿ ಅಲ್ಲದೆ ಉತ್ತರ ಕರ್ನಾಟಕದ ಭಾಗದಲ್ಲಿ ಜನರು ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ. ಅವರ ಮನೆಮಗನಾಗಿ ಸೇವೆ ಮಾಡಿಕೊಂಡು ಬಂದಿದ್ದೇನೆ. ನನ್ನ ಮತ್ತು ಕುಮಾರಸ್ವಾಮಿ ನಡುವೆ ರಾಜಕೀಯ ಸಂಬಂಧವೇನೂ ಇಲ್ಲ. ಜಾತ್ಯತೀತ ಜನತಾದಳ ಬಳ್ಳಾರಿ ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ನಿಲ್ಲಿಸದೇ ಇರುವುದು ಆ ಪಕ್ಷದ ನಿರ್ಧಾರ ಹೊರತು ಬೇರೇನೂ ಇಲ್ಲ" ಎಂದು ಶ್ರೀರಾಮುಲು, ತಮ್ಮ ವಿರುದ್ಧ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದ ಬಗ್ಗೆ ಸ್ಪಷ್ಟಪಡಿಸಿದರು.

ಈ ಮರುಚುನಾವಣೆಯಲ್ಲಿ ಜನರು ನನ್ನನ್ನು ಆಶೀರ್ವದಿಸುತ್ತಾರೆ ಎನ್ನುವ ನಂಬಿಕೆ ನನಗಿದೆ. ನಮ್ಮ ಬಳಿ ದುಡ್ಡು ಇದೆ, ದುಡ್ಡು ಕೊಟ್ಟು ವೋಟು ಖರೀದಿಸುತ್ತಾರೆ ಎನ್ನುವ ಮಾತು ಸುಳ್ಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಮಾನವೇ ಅಂತಿಮ. ನನ್ನ ಭಾಗದ ಜನರನ್ನು ಪ್ರೀತಿ ವಿಶ್ವಾಸದಿಂದ ಕಂಡಿದ್ದೇನೆ. ಇದೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಅವರು ವಿಶ್ವಾಸದಿಂದ ನುಡಿದರು. ಮುಂದುವರಿಯಲಿದೆ....

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+