ಅಸಲಿಗೆ ರೆಡ್ಡಿ ಕುಠೀರದ ವಿಸ್ತೀರ್ಣ ಎಷ್ಟಿದೆ ಅಂದ್ಕೊಂಡ್ರಿ ?

ಮೂರು ವರ್ಷಗಳ ಹಿಂದೆ ಕಾಪೌಂಡ್ ಗೋಡೆ ನಿರ್ಮಾಣ ಆರಂಭವಾಯಿತಾದರೂ ಸ್ಥಳೀಯರು ಈ ಎತ್ತರದ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾರ್ಪೊರೇಶನ್ನಿನ ಮಿತಿಮೀರಿ ಎಬ್ಬಿಸುತ್ತಿದ್ದ ಗೋಡೆಗೆ ತೀವವರ ವಿರೋಧ ವ್ಯಕ್ತವಾದಾಗ ರೆಡ್ಡಿ ತಮ್ಮ ಬಾಹುಬಲ ಮತ್ತು ಹಣ ಬಲವನ್ನು ಬಳಸಿ ಅಗತ್ಯ ಅನುಮತಿ ಪಡೆದು ನಿರ್ಮಾಣ ಮುಂದುವರಿಸಿದ್ದರು.
ಮನೆ ಮಂದಿ ಮನೆಯಿಂದ ಹೊರಹೋಗುತ್ತಿಲ್ಲ. ಆಳುಕಾಳುಗಳೇ ಹೊರಗೆ ಹೋಗಿ ಸಣ್ಣ ಪ್ರಮಾಣದಲ್ಲಿ ಬೇಳೆ ಕಾಳು ತರುತ್ತಿದ್ದಾರೆ. ಬಂದು ಹೋಗುವ ಬಂಧುಮಿತ್ರರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅದರ ಬಳಕೆಯೂ ಕಡಿಮೆಯಾಗಿದೆ.
ಕುಠೀರದಲ್ಲಿ ಗಣ್ಯಾತಿಗಣ್ಯ ವ್ಯಕ್ತಿಗಳಿಗೆಂದೇ ವಿಶೇಷವಾದ ಅಡುಗೆ ತಯಾರಿಸಲು ರೆಡ್ಡಿ ಉತ್ತರ ಭಾರತದಿಂದ ಅಡುಗೆಯವನನ್ನು ಕರೆತಂದಿದ್ದರು. ಆತನ ಸಂಬಳ ತಿಂಗಳಿಗೆ 50 ಸಾವಿರ ರುಪಾಯಿಯಷ್ಟಿತ್ತು. ಈತನೀಗ ರೆಡ್ಡಿಗೆ ಸೇರಿದ ಪಂಚತಾರಾ ಹೋಟೆಲಿನಲ್ಲಿ ಆಶ್ರಯ ಕಂಡುಕೊಂಡಿದ್ದಾನೆ ಎಂಬ ಮಾಹಿತಿ ಇದೆ.












Click it and Unblock the Notifications