ಹುಬ್ಬಳ್ಳಿಯಲ್ಲಿ ನಾಲ್ವರು ಬಾಡಿಗೆ ಹಂತಕರ ಬಂಧನ

ಹಳೆ ಹುಬ್ಬಳ್ಳಿಯಲ್ಲಿರುವ ಅಹ್ಮದೀಯ ಇಂಜಿನಿಯರಿಂಗ್ ಫ್ಯಾಕ್ಟರಿಯ ಮಾಲಿಕ ಮುನ್ವರ್ ಅಹ್ಮದ್ ಹತ್ಯೆಗೀಡಾದವರು. ಮುನ್ವರ್ ಅವರು ನಾಪತ್ತೆಯಾಗಿದ್ದ ಕಾರಣ ಅಕ್ಟೋಬರ್ 21ರಂದು ಅವರ ಪತ್ನಿ ನುಸ್ರತ್ ಜಬೀನ್ ಪೊಲೀರಸಿಗೆ ದೂರು ನೀಡಿದ್ದರು.
ಸಾಕಷ್ಟು ಹುಡುಕಾಟದ ನಂತರ ಫ್ಯಾಕ್ಟರಿಯ ನೀರಿನ ಟ್ಯಾಂಕ್ನಲ್ಲಿ ಮುನ್ವರ್ ಅವರ ದೇಹ ದೊರೆತಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಂತಕರ ಬೇಟೆಗೆ ತೊಡಗಿದ್ದರು. ಕೊಲೆಯ ಜಾಡನ್ನು ಹಿಡಿದು ಹೊರಟ ಹಳೆ ಹುಬ್ಬಳ್ಳಿ ಠಾಣೆಯ ಇನ್ ಸ್ಪೆಕ್ಟರ್ ಸಚಿನ್ ಛಲವಾದಿ, ಕೊಲೆಗಡುಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹತ್ಯೆಗೆ ಕಾರಣ : ಮುನ್ವರ್ ಫ್ಯಾಕ್ಟರಿ ಆರಂಭಿಸಿದ ನಂತರ ಸಾಕಷ್ಟು ಏಳ್ಗೆ ಕಂಡಿದ್ದರು. ಅದನ್ನು ಸಹಿಸದ ಅವರ ಸಹೋದರರೇ ಮುನ್ವರ್ ಅವರ ಹತ್ಯೆಗೆ ಸಂಚು ಹೂಡಿದ್ದರು ಮತ್ತು ಬಾಡಿಗೆ ಹಂತಕರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಪೂರೈಸಿದ್ದರು.












Click it and Unblock the Notifications