Get Updates
Get notified of breaking news, exclusive insights, and must-see stories!

ಮಂಗಳೂರು ಚರ್ಚ್ ದಾಳಿಯ ಹಿಂದೆ ಕ್ರೈಸ್ತ ಯುವಕ?

Mangalore Church Attack
ಮಂಗಳೂರು, ನ. 5: ನಗರದ ಹೃದಯ ಭಾಗದಲ್ಲಿರುವ ಕಂಕನಾಡಿ ಸೈಟ್ ಅಲ್ಫೋನ್ಸಾ ಚರ್ಚ್ ಮೇಲೆ ಗುರುವಾರ (ನ. 3) ನಡೆದ ದಾಳಿಯ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಆರೋಪಿ ಶಿಬು ಎನ್ನುವ ಯುವಕನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗೆ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆರೋಪಿ ಕೇರಳ ಮೂಲದ ಕ್ರೈಸ್ತ ಸಮುದಾಯದವನು ಎನ್ನಲಾಗಿದೆ.

ಆರೋಪಿ ಶಿಬು ನಗರ ನಿವಾಸಿಯಾಗಿದ್ದು, ಎವರೆಸ್ಟ್ ಟ್ರಾವೆಲ್ ಎನ್ನುವ ಸಿಟಿ ಬಸ್ ನಲ್ಲಿ ಈ ಹಿಂದೆ ಕಂಡಕ್ಟರ್ ಆಗಿದ್ದ. ಕಳೆದ ಕೆಲ ತಿಂಗಳಿನಿಂದ ಅನಾರೋಗ್ಯ ಪೀಡಿತನಾಗಿದ್ದ ಈತ ಘಟನೆ ನಡೆದ ರಾತ್ರಿ ವಿಪರೀತ ಮದ್ಯಪಾನ ಸೇವಿಸಿ ಚರ್ಚ್ ಒಳಗೆ ನುಗ್ಗಿ ದಾಂಧಲೆ ನಡೆಸಿದ್ದ. ಮೇರಿಮಾತೆಯ ಕಿರೀಟವನ್ನು ಕೆಳಗೆಸೆದು ಯೇಸು ಮೂರ್ತಿಯ ಪಾದಕ್ಕೆ ಹಾನಿ ಎಸಗಿದ್ದ. ಅಲ್ಲದೆ ಧರ್ಮಗುರುಗಳ ಪವಿತ್ರ ವಸ್ತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದ.

ಅಲ್ಲೇ ವಾಸವಾಗಿದ್ದ ವಿದ್ಯಾರ್ಥಿಗಳು ಕೂಗಿದಾಗ ಧರ್ಮಗುರುಗಳ ಶ್ವೇತವಸ್ತ್ರವನ್ನು ಧರಿಸಿ ಓಡತೊಡಗಿದ. ಆದರೆ ಕೂಡಲೇ ಅಲ್ಲಿದ್ದವರು ಚರ್ಚಿನ ಗೇಟ್ ಹಾಕಿದ್ದರಿಂದ ಆತ ತಪ್ಪಿಸಿಕೊಳ್ಳಲಾಗಲಿಲ್ಲ. ಚರ್ಚಿನ ಆಡಳಿತ ಮಂಡಳಿಯವರು ಅಲ್ಲಿಗೆ ಬಂದು ಪರಿಶೀಲಿಸಿದ ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದು ದೇಶದ ಸಂವಿಧಾನಕ್ಕೆ ಧಕ್ಕೆ ಉಂಟು ಮಾಡುವ ಘಟನೆ ಎಂದು ಬಿಷಪ್ ಬೇಸರ ವ್ಯಕ್ತಪಡಿಸಿದ್ದಾರೆ. ಯೇಸು ಮತ್ತು ಮೇರಿ ಮೂರ್ತಿಗಳಿಗೆ ಹಾನಿ ಉಂಟಾಗಿದೆ. ಇದರ ಬಗ್ಗೆ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ರಾಜ್ಯ ಸರಕಾರ ಸೂಕ್ತ ರಕ್ಷಣೆ ನೀಡಬೇಕೆಂದು ಕರ್ನಾಟಕ ಮಲಯಾಳಿ ಕ್ರಿಶ್ಚಿಯನ್ ಒಕ್ಕೂಟ ಒತ್ತಾಯಿಸಿದೆ.

ಜನಾರ್ಧನ ಪೂಜಾರಿ ಹೇಳಿಕೆ:
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಧುರೀಣ ಪೂಜಾರಿ, ಈ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿ. ಈ ಹಿಂದೆ ನಡೆದ ಚರ್ಚ್ ದಾಳಿಯ ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡಿದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+