Get Updates
Get notified of breaking news, exclusive insights, and must-see stories!

ಬೆಂಗ್ಳೂರು ವಿವಿ ಕುಲಸಚಿವರಾಗಿ ಮೈಲಾರಪ್ಪ ನೇಮಕ

Bangalore University VC Prof. Mylarappa
ಬೆಂಗಳೂರು, ನ.2: ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಮೈಲಾರಪ್ಪ ಅವರನ್ನು ನೂತನ ಕುಲಸಚಿವರಾಗಿ ಕರ್ನಾಟಕ ನೇಮಕ ಮಾಡಿ, ಬುಧವಾರ(ನ.2)ರಂದು ಆದೇಶ ಹೊರಡಿಸಿದೆ. ಈ ಮೂಲಕ ಕುಲಸಚಿವರಾಗಿ ನೇಮಕಗೊಂಡ ಮೊದಲ ದಲಿತ ಪ್ರೊಫೆಸರ್ ಎಂಬ ಕೀರ್ತಿಗೆ ಮೈಲಾರಪ್ಪ ಪಾತ್ರರಾಗಿದ್ದಾರೆ.

ಡಾ.ಬಿ.ಸಿ.ಮೈಲಾರಪ್ಪ ಅಲಿಯಾಸ್ ಚಿಕ್ಕಮೇಲೂರಪ್ಪ ಅವರನ್ನು ನೂತನ ಕುಲಸಚಿವರನ್ನಾಗಿ ನೇಮಕ ಮಾಡಲು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅನುಮತಿ ನೀಡಿರುವುದು ಶೈಕ್ಷಣಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.

ಕುಲಸಚಿವರಾಗಿರುವ ಡಾ.ಆರ್.ಎಂ.ರಂಗನಾಥ್ ಅವರ ಅಧಿಕಾರ ಅವಧಿ ಮುಗಿಯುವ ಮುನ್ನವೇ ಅವರನ್ನು ಎತ್ತಂಗಡಿ ಮಾಡಲಾಗಿದೆ. 2012ರ ಮೇ ತಿಂಗಳಲ್ಲಿ ರಂಗನಾಥ್ ಅವರ ಅವಧಿ ಮುಕ್ತಾಯವಾಗಲಿದೆ.

ಆದರೆ ಅವರನ್ನು ಎತ್ತಂಗಡಿ ಮಾಡಿ ಮೈಲಾರಪ್ಪ ಅವರನ್ನು ನೇಮಕ ಮಾಡಿರುವುದು ವಿ.ವಿ ಪ್ರಾಧ್ಯಾಪಕ ವಲಯದಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಮಾಜಿ ಶಾಸಕರೊಬ್ಬರ ನೆರವಿನಿಂದ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಕುಲಸಚಿವ ಸ್ಥಾನಕ್ಕೇರಿದ್ದಾರೆ ಎಂಬ ಸುದ್ದಿ ಹಬ್ಬಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+