ರಾಜ್ಯೋತ್ಸವ ಪ್ರಶಸ್ತಿ ಗಿಟ್ಟಿಸಿಕೊಂಡವರ ಸಂಪೂರ್ಣ ಪಟ್ಟಿ

56th Kannada Rajyotsava : Awardees complete list
ಬೆಂಗಳೂರು, ಅ. 31 : 56ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಪ್ರಶಸ್ತಿ ಪಡೆದವರ ಹೆಸರು, ಕ್ಷೇತ್ರ ಮತ್ತು ಜಿಲ್ಲೆಯ ವಿವರ ಕೆಳಗಿನಂತಿದೆ. ಈ ಬಾರಿ 50 ಸಾಧಕರಿಗೆ ಪ್ರಶಸ್ತಿ ಒಲಿದಿದೆ.

ನವೆಂಬರ್ 1ನೇ ತಾರೀಖಿನಂದು ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ರವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಆ ಮುನ್ನ ವಿಧಾನಸೌಧದ ಸಭಾಂಗಣದಲ್ಲಿ ರಾಜ್ಯೋತ್ಸವದ ಅಂಗವಾಗಿ ಸಂತೋಷಕೂಟವನ್ನು ಏರ್ಪಡಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರು ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಸಂಘ ಸಂಸ್ಥೆ ಸೇರಿದಂತೆ 20 ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಏಳ್ಗೆಗೆ ಕಾರಣರಾದ 50 ಸಾಧಕರ ವಿವರ ಕೆಳಗಿನಂತಿದೆ.

ಕ್ರ.ಸಂ. ಹೆಸರು ಜಿಲ್ಲೆ
ಸಾಹಿತ್ಯ
1 ಪ್ರೊ.ಅರವಿಂದ ಮಾಲಗತ್ತಿ ಬಿಜಾಪುರ
2 ಡಾ|| ವೀರಣ್ಣ ದಂಡೆ ಗುಲಬರ್ಗಾ
3 ಮಂಡೀರ ಜಯಾ ಅಪ್ಪಣ್ಣ (ಕೊಡವ) ಕೊಡಗು
ರಂಗಭೂಮಿ
1 ಕೆ.ನಾಗರಾಜ ಚಿತ್ರದುರ್ಗ
2 ರೇಣುಕಾ ದುರ್ಗಪ್ಪ ಹರಿಜನ ಮಾಲಾಪೂರ ಬಾಗಲಕೋಟೆ
ಕನ್ನಡ ಭಾಷಾ ಸಂಶೋಧನೆ/ಅಭಿವೃದ್ಧಿ
1 ಡಾ|| ಶಾಂತಿನಾಥ ದಿಬ್ಬದ ಬೆಳಗಾವಿ
ನೃತ್ಯ
1 ಕೆ.ಎಸ್.ಅಂಬಳೆ ರಾಜೇಶ್ವರಿ ಹಾಸನ
ಸಂಗೀತ
1 ಎಚ್.ಘಲ್ಗುಣ (ಸುಗಮ ಸಂಗೀತ) ಚಾಮರಾಜನಗರ
2 ಬಾಲಚಂದ್ರ ನಾಕೋಡ (ಹಿಂ.ಸಂಗೀತ) ಧಾರವಾಡ
3 ಗಣೇಶ ಪುತ್ತೂರು (ಸ್ಯಾಕ್ಸೋಫೋನ್) ದ.ಕ.ಜಿಲ್ಲೆ
4 ಶಂಕರ ಬಿನ್ನಾಳ (ಶಾಸ್ತ್ರೀಯ ಸಂಗೀತ) ಕೊಪ್ಪಳ
5 ಡಾ|| ಕೆ.ಎಸ್.ವೈಶಾಲಿ (ಶಾಸ್ತ್ರೀಯ/ಸುಗಮ ಸಂಗೀತ) ಶಿವಮೊಗ್ಗ
ಜಾನಪದ
1 ಡಾ|| ರಾಮೇಗೌಡ (ವಿದ್ವಾಂಸರು) ಮಂಡ್ಯ
2 ಮಹಾಲಿಂಗಯ್ಯ ಬಿ.ಗಣಾಚಾರಿ (ಗಾಯನ) ಬಾಗಲಕೋಟೆ
3 ವಿರೂಪಾಕ್ಷಪ್ಪ ಸುಡುಗಾಡುಸಿದ್ದ (ಜನಪದಕಲೆ) ಬಳ್ಳಾರಿ
4 ಪಾರ್ವತೆವ್ವ ಹೊಂಗಲ್ ಧಾರವಾಡ
5 ಮಹೇಶ್ವರಪ್ಪ ಹೊನ್ನಾಳಿ ದಾವಣಗೆರೆ
ಯಕ್ಷಗಾನ
1 ವಿಠೋಬ ಹಮ್ಮಣ್ಣ ನಾಯಕ ಉ.ಕನ್ನಡ
2 ಕುಂಜಾಲು ರಾಮಕೃಷ್ಣ ನಾಯಕ ಉಡುಪಿ
ಕಲೆ/ಚಿತ್ರಕಲೆ/ಛಾಯಾಚಿತ್ರ
1 ಡಾ|| ಅನಿಲ್‌ಕುಮಾರ್ ಟಿ (ಗ್ರಾಫಿಕ್ಸ್/ಚಿತ್ರಕಲೆ) ಬೆಂಗಳೂರು
2 ನಾಗರಾಜ ವೀರಭದ್ರಪ್ಪ ಶಿಲ್ಪಿ (ಶಿಲ್ಪ) ಗದಗ
ಸಾಂಸ್ಕೃತಿಕ ಸಂಘಟನೆ
1 ಮೋಹನ ನಾಗಮ್ಮನವರ ಹಾವೇರಿ
ಚಲನಚಿತ್ರ / ಕಿರುತೆರೆ
1 ಕೆ.ಶಿವರುದ್ರಯ್ಯ ಬೆಂಗಳೂರು
2 ಎ.ಆರ್.ರಾಜು ಬೆಂಗಳೂರು
3 ಸರಿಗಮ ವಿಜಿ ಬೆಂಗಳೂರು
ಶಿಕ್ಷಣ
1 ಪ್ರೊ|| ಪಿ.ಎಂ.ಚಿಕ್ಕಬೋರಯ್ಯ ಮೈಸೂರು
2 ಕೆ.ಶಾಂತಯ್ಯ ರಾಯಚೂರು
3 ಅಜ್ರಾ ಚಿಕ್ಕಮಗಳೂರು
ಕೃಷಿ
1 ಬಸವರಾಜ ತಂಬಾಕೆ ಬೀದರ್
ವಿಜ್ಞಾನ/ತಂತ್ರಜ್ಞಾನ
1 ಡಾ|| ಹರೀಶ್ ಹಂದೆ ಬೆಂಗಳೂರು
ಮಾಧ್ಯಮ
1 ಕೆ.ಎನ್.ತಿಲಕಕುಮಾರ (ಡೆಕ್ಕನ್ ಹೆರಾಲ್ಡ್/ಪ್ರಜಾವಾಣಿ ಗ್ರೂಪ್) ಬೆಂಗಳೂರು
2 ಜಿ.ಎಸ್.ಕುಮಾರ್ (ಟೈಮ್ಸ್ ಆಫ್ ಇಂಡಿಯಾ) ಬೆಂಗಳೂರು
3 ಮಂಜುನಾಥ ಭಟ್ (ಸಂಯುಕ್ತ ಕರ್ನಾಟಕ) ಉ.ಕ
4 ಪ್ರತಾಪ ಸಿಂಹ (ಕನ್ನಡಪ್ರಭ) ಬೆಂಗಳೂರು
5 ಜಗದೀಶ ಮಾಣಿಯಾಣಿ (ಈ ಟಿವಿ) ಕಾಸರಗೋಡು
ಕ್ರೀಡೆ
1 ತೇಜಸ್ವಿನಿಬಾಯಿ (ಕಬಡ್ಡಿ) ಬೆಂಗಳೂರು
2 ರಮೇಶ್ ಟಿಕಾರಾಂ (ಅಥ್ಲೆಟಿಕ್ಸ್) ಬೆಂಗಳೂರು
ವೈದ್ಯಕೀಯ
1 ಡಾ|| ಬಿ.ರಮೇಶ್ ತುಮಕೂರು
2 ಡಾ|| ಬಸವಣ್ಣೆಯ್ಯ (ಚನ್ನಗಿರಿ) ದಾವಣಗೆರೆ
ಹೊರನಾಡು /ಹೊರದೇಶ
1 ಡಾ|| ಎಂ.ಎನ್.ನಂದಕುಮಾರ್ ಲಂಡನ್
2 ಡಾ|| ಪುರುಷೋತ್ತಮ ಬಿಳಿಮಲೆ ದೆಹಲಿ
3 ಐಕಳ ಹರೀಶ್ ಶೆಟ್ಟಿ ಮುಂಬೈ
4 ನೇರಂಬಳ್ಳಿ ರಾಘವೇಂದ್ರರಾವ್ ಹೈದರಾಬಾದ್
ಸಮಾಜಸೇವೆ
1 ಅಮ್ಜದ್ ಖಾನ್ ಹಾಸನ
2 ಎಂ.ಬಿ.ನರಗುಂದ ಬೆಳಗಾವಿ
ಸಂಕೀರ್ಣ
1 ಡಾ|| ಸಿದ್ದಯ್ಯ (ತರಳಬಾಳು ಕೇಂದ್ರ) (ಶಿಕ್ಷಣ, ಅಧ್ಯಾತ್ಮ ಸಮಾಜಸೇವೆ) ಚಿತ್ರದುರ್ಗ
2 ಡಾ|| ಆರ್.ಎಂ.ವಿ ಪ್ರಸಾದ್ (ವೈದ್ಯಕೀಯ, ಸಮಾಜಸೇವೆ, ಕಲಾಸಂಘಟನೆ) ಬೆಂಗಳೂರು (ಗಾಯನಸಮಾಜ)
3 ಶಿವಾನಂದ ಚ.ಮ್ಯಾಗೇರಿ (ಸಂಗೀತ, ಶಿಕ್ಷಣ, ಸಂಘಟನೆ) ಹಾವೇರಿ
ಸಂಘ/ಸಂಸ್ಥೆ
1 ಮಹಾತ್ಮಗಾಂಧಿ ಖಾದಿ ಗ್ರಾಮೋದ್ಯೋಗ ಸಂಘ, ಹುದಲಿ ಬೆಳಗಾವಿ
2 ಶಾಂತಿವನ ಟ್ರಸ್ಟ್-ಧರ್ಮಸ್ಥಳ ದ.ಕನ್ನಡ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+