ಬೆಂಗಳೂರಿನಲ್ಲಿ ಮೆಟಾಲಿಕ ರಾಕ್ ಬ್ಯಾಂಡ್

ಗೋವಿಂದ. ಅಸಡ್ಡಾಳ ಹುಡುಗ. ಬರೀ ಚೈನೀ ಮಾಡ್ತಾನ. ಏನೋನೋ ಕಷ್ಟಪಟ್ಟು ಪಿಯು ಪಾಸಾಗಿ ಹಂಗೂಇಂಗೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡ. ಈಗ ಅವನು 1st BE ವಿದ್ಯಾರ್ಥಿ. ಕಂಪ್ಯೂಟರ್ ಸೈನ್ಸ್.
ಅಪ್ಪ ಅಮ್ಮನ ಬಳಿ ಅವನದು ಒಂದೇ ವರಾತ. 4 ಸಾವಿರ ರೂಪಾಯಿ ಅರ್ಜೆಂಟಾಗಿ ಬೇಕಂತ ಹಠ ಮಾಡ್ತಿದ್ದ. ಯಾಕಂದ್ರೆ, ಬರೋ ಭಾನುವಾರ ಬೆಂಗಳೂರಿನಲ್ಲಿ ಮ್ಯೂಸಿಕ್ ಕನ್ಸರ್ಟ್ ಇದೆ. ಅವನ ಫ್ರೆಂಡ್ಸ್ ಎಲ್ಲ ಹೋಗ್ತಾ ಇದಾರೆ. ಇವನೂ ಹೋಗಬೇಕು.
ಟಿಕೆಟ್ ಬೆಲೆಗಳು ಭಯಂಕರವಾಗಿವೆ. 3 ಲಕ್ಷ, 2 ಲಕ್ಷ, 25 ಸಾವಿರ, 15 ಸಾವಿರ, 2700, 1600 ರೂ ವರಸೆಗಳಲ್ಲಿವೆ. ಗೋವಿಂದನಿಗೆ ಒಂದೇ ಆಸೆ. 2700 ರೂ ಟಿಕೆಟ್ ಖರೀದಿಸಿ ಬೆಂಗಳೂರು ಅರಮನೆ ಮೈದಾನಕ್ಕೆ ನುಗ್ಗಬೇಕು. ಎಂಜಾಯ್ ಮಾಡಬೇಕು.
ಅವನಿಗೆ ಇನ್ನೂ ಒಂದು ಆಸೆ. ಟಿಕೆಟ್ ಖರೀದಿಸಿ ಉಳಿದ 1300 ರೂಪಾಯಿಯಲ್ಲಿ ಕಾಸಾ ಪಿಕೋಲಾಗೆ ಹೋಗಿ ಒಂದು ಬರ್ಗರ್ ತಿಂದು ಕೋಲಾ ಕುಡಿದು ಕುಪ್ಪಳಿಸಿ ಸರಿರಾತ್ರಿ ಫ್ರೆಂಡ್ ಮೋಟಾರ್ ಬೈಕಿನಲ್ಲಿ ಬಂದು ಮನೆ ಸೇರಿಕೊಳ್ಳಬೇಕು.
ಹಗಲು ರಾತ್ರಿ ಕನಸು ಮನಸಿನಲ್ಲಿ ಗೋವಿಂದನನ್ನು ಕೆಣಕುತ್ತಿರುವ ರಾಕ್ ಬ್ಯಾಂಡ್ ನಡೆಸಿಕೊಡುತ್ತಿರುವವರು ಯೂನಿವರ್ಸ್ ಲ್ ಮ್ಯೂಸಿಕ್ ಗ್ರೂಪ್ (UMG)ಇದು ವರ್ಲಡ್ ಫೇಮಸ್ ಮ್ಯೂಸಿಕ್ ಕಂಪನಿ.
ವಿಶ್ವದ ನಾನಾ ಕಡೆ ಲೈವ್ ಇನ್ ಕಾನ್ಸರ್ಟ್ ಪ್ರದರ್ಶನಗಳನ್ನು ನೀಡುವ ಸಂಸ್ಥೆಯ ಕೇಂದ್ರ ಕಚೇರಿ ಅಮೆರಿಕಾದಲ್ಲಿದೆ. ಸಂಗೀತ ಉದ್ಯಮದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಸಂಸ್ಥೆಯ ಒಡೆತನ ಫ್ರಾನ್ಸಿನ ವಿವಂಡಿ.
ಒಂದು ನೂರು ದಶಲಕ್ಷ ಆಲ್ಬಂಮ್ಮುಗಳು ಹೊರತಂದಿರುವ, 9 ಗ್ರಾಮಿ ಪ್ರಶಸ್ತಿಗಳನ್ನು ಬಾಚಿಕೊಂಡಿರುವ Metallica ರಾಕ್ ಬ್ಯಾಂಡ್ ಬಜಾಯಿಸುವ ಹುಡುಗರು ಇದೀಗ ಬೆಂಗಳೂರಿಗೆ ಬರುತ್ತಿದ್ದಾರೆ. Sonisphere Festival ಸಾದರ ಪಡಿಸುತ್ತಿರುವ ಮೆಟಾಲಿಕಾ ಇಂಡಿಯಾ ಟೂರ್ 2011 ರಲ್ಲಿ ತಾನೂ ಭಾಗವಹಿಸಬೇಕೆನ್ನುವುದು ಗೋವಿಂದನ ಅದಮ್ಯ ಹಂಬಲವಾಗಿದೆ.
ಅಕ್ಟೋಬರ್ 30 ಭಾನುವಾರ ಸಂಜೆ ಬೆಂಗಳೂರು ಅರಮನೆ ಮೈದಾನದಲ್ಲಿ ಶೋ ಇದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications