ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಜ್ಜಯಿನಿ ಮರುಳಸಿದ್ಧ ಶಿವಾಚಾರ್ಯರು ಲಿಂಗೈಕ್ಯ
ಲಿವರ್ ಟ್ರಾನ್ಸ್ಪ್ಲಂಟೇಶನ್ ನಂತರ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಉಜ್ಜಯಿನಿ ಮರುಳಸಿದ್ಧ ರಾಜದೇಶೀಕೇಂದ್ರ ಶಿವಾಚಾರ್ಯ ಜಗದ್ಗುರುಗಳು (48) ಚೇತರಿಸಿಕೊಳ್ಳದೇ ಇದ್ದಾಗ ಅವರ ಸ್ವ ಇಚ್ಚೆಯಂತೆ ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಅವರನ್ನು ಸೋಮವಾರ ರಾತ್ರಿ 8.30ರ ಸುಮಾರಿಗೆ ಕೃತಕ ಉಸಿರಾಟದ ವೆಂಟಿಲೇಟರ್ಗಳ ಮೂಲಕವೇ ಕರೆ ತರಲಾಯಿತು.
ಪೀಠಕ್ಕೆ ಶ್ರೀಗಳು ಆಗಮಿಸುತ್ತಿದ್ದಂತೆಯೇ ಸಭೆ ಸೇರಿದ್ದ ಭಕ್ತರು ಶ್ರೀಗಳಿಗೆ ಜೈಕಾರ ಹಾಕುತ್ತಲೇ ವೇದಮಂತ್ರಗಳ ಘೋಷಣೆಗೆ ಮುಂದಾದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಿವಾಚಾರ್ಯರು, ಶಾಸ್ತ್ರಿಗಳು ಮತ್ತು ಭಕ್ತರ ಸಮ್ಮುಖದಲ್ಲಿಯೇ ಶ್ರೀಗಳ ಕೃತಕ ಉಸಿರಾಟ ವ್ಯವಸ್ಥೆಯನ್ನು ತೆಗೆಯಲಾಯಿತು. ವೆಂಟಿಲೇಟರ್ಗಳನ್ನು ತೆಗೆದ ನಂತರ 10 ನಿಮಿಷಗಳ ಕಾಲ ಶ್ರೀಗಳು ಉಸಿರಾಡಿದರು ಎಂದು ಆಪ್ತ ಮೂಲಗಳು ತಿಳಿಸಿವೆ.
Comments
English summary
Sri Shivacharya Jagadguru of Ujjain Sri Shivacharya is no more. He breathed his last at 8.40 pm in Mutt. He was brought to Toranagallu from Delhi on artificial ventilator. Devotees are flocking to have last darshan of the seer.
Story first published: Tuesday, October 18, 2011, 6:50 [IST]