ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾನಂದ ಗೌಡ ನಿಜವಾಗಿಯೂ ಯಡಿಯೂರಪ್ಪ ಕೈಗೊಂಬೆಯೇ: ಶೆಟ್ಟರ್

By Srinath
|
Google Oneindia Kannada News

mining-report-dvs-bsy-puppet-cm-shettar
ಬೆಂಗಳೂರು, ಅ.14: ಹೀಗೆಂದವರು ಶೆಟ್ಟರ್. ಅದೂ ಸಂಪುಟ ಸಭೆಯಲ್ಲಿ. ಸಭೆಯ ಒಂದು ಹಂತದಲ್ಲಿ ಸದಾನಂದ ಗೌಡ ಅವರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ಶೆಟ್ಟರ್ ಬಣದ ಕೆಲ ಸದಸ್ಯರು, 'ನೀವು ಯಡಿಯೂರಪ್ಪ ಅವರ ಕೈಗೊಂಬೆಯಲ್ಲ ಎಂದು ತಿಳಿದಿದ್ದೆವು. ಆದರೆ, ನಿಜವಾಗಿಯೂ ಅವರ ಕೈಗೊಂಬೆಯೇ ಎಂಬುದು ಸಾಬೀತಾಗುತ್ತಿದೆ. ಯಡಿಯೂರಪ್ಪ ಕೂಡ ಸಚಿವರ ಗಮನಕ್ಕೆ ತಾರದೇ ವಿಷಯ ಮಂಡಿಸುತ್ತಿದ್ದರು. ನೀವು ಕೂಡ ಅದೇ ಹಾದಿಯಲ್ಲಿ ನಡೆಯುತ್ತಿದ್ದೀರಿ' ಎಂದು ತರಾಟೆಗೆ ತೆಗೆದುಕೊಂಡರು ಎಂದು ಗೊತ್ತಾಗಿದೆ.

ಅಧಿಕಾರಿಗಳು ಸಭೆಯಿಂದ ಹೊರಕ್ಕೆ: ಸರ್ಕಾರದಲ್ಲಿನ ಎರಡೂ ಬಣಗಳ ಸಚಿವರ ನಡುವೆ ಇದೇ ವಿಷಯವಾಗಿ 45 ನಿಮಿಷಗಳ ಕಾಲ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಸಭೆಯಿಂದ ಹೊರಕ್ಕೆ ಕಳುಹಿಸಲಾಗಿತ್ತು.

ಅಂತಿಮವಾಗಿ ಕೆಲ ತಾಂತ್ರಿಕ ವಿಷಯಗಳ ಬಗ್ಗೆ ಲೋಕಾಯುಕ್ತರಿಂದ ಸಲಹೆ ಕೋರುವ ತೀರ್ಮಾನಕ್ಕೆ ಒಪ್ಪಿಗೆ ನೀಡುವಂತೆ ಸದಾನಂದ ಗೌಡ ಅವರು ಶೆಟ್ಟರ್ ಬಣದ ಸದಸ್ಯರನ್ನು ಮನವೊಲಿಸಿದರು ಎನ್ನಲಾಗಿದೆ.

ಶ್ರೀರಾಮುಲು ಅವರು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಅಂಗೀಕರಿಸಿದ ದಿನವೇ ಯಡಿಯೂರಪ್ಪ ಪರ ನಿರ್ಧಾರಕ್ಕೆ ಮುಂದಾಗಿರುವ ಬಗ್ಗೆಯೂ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಒಬ್ಬರ ಪರ ಮತ್ತು ಒಬ್ಬರ ವಿರುದ್ಧ ಏಕೆ ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಯವರಿಗೆ ಸಚಿವರು ನೇರವಾಗಿ ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ.

English summary
Karnataka Govt has decided to send back Lokayukta Santosh Hegde illegal mining report on Oct 13. This decision was taken at a cabinet meeting which saw a political turmoil. Now the cabinet is pro and against BSY. Senior leader calls the CM Sadanada Gowda as BSY puppet CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X