ರಿಯಲ್‌ ಎಸ್ಟೆಟ್ ಕಾಳಗ‌: ಹಾಡಹಗಲೇ ತುಮಕೂರಿನಲ್ಲೂ ಬಿತ್ತು ಹೆಣ

tumkur-real-estate-developer-killed
ತುಮಕೂರು, ಅ. 12: ಇಲ್ಲಿನ ಶಿರಾ ಗೇಟ್‌ ಸಮೀಪವಿರುವ ಅರಳೀಮರದ ಪಾಳ್ಯದ 80 ಅಡಿ ಮುಖ್ಯರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ರಿಯಲ್‌ ಎಸ್ಟೇಟ್‌ ಉದ್ಯಮಿ ನರಸಿಂಹಮೂರ್ತಿ (35) ಎಂಬುವವರನ್ನು ಸಿನಿಮೀಯ ರೀತಿಯಲ್ಲಿ ಮಚ್ಚು ಲಾಂಗುಗಳಿಂದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ.

ಶಿರಾ ಗೇಟ್‌ನಿಂದ ಕೇವಲ 150 ಮೀ. ಅಂತರದಲ್ಲಿ ವ್ಯಕ್ತಿಯೊಬ್ಬನನ್ನು ಜನನಿಬಿಡ 80 ಅಡಿ ರಸ್ತೆಯಲ್ಲಿಯೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವುದು ನಾಗರೀಕರನ್ನು ಬೆಚ್ಚಿ ಬೀಳಿಸಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ನಡೆಯುತ್ತಿದ್ದ ಹಗಲು ಹೊತ್ತಿನ ಸಿನಿಮೀಯ ರೀತಿಯ ಕೊಲೆಗಳು (ತಾಜಾ ಆಗಿ ಕಾರ್ಪೊರೇಟರ್ ನಟರಾಜ್ ಹತ್ಯೆ) ತುಮಕೂರಿನಲ್ಲಿ ನಡೆಯುತ್ತಿರುವುದು ನಾಗರೀಕರಿಗೆ ಆತಂಕ ಮೂಡಿಸಿದೆ.

ಕೊಲೆಯಾಗಿರುವ ನರಸಿಂಹಮೂರ್ತಿ ಮೂಲತಃ ಊರುಕೆರೆಯವರು. ಕೆಲವು ವರ್ಷಗಳಿಂದ ನಗರದ ಅರಳೀಮರದ ಪಾಳ್ಯದಲ್ಲಿ ವಾಸವಾಗಿದ್ದುಕೊಂಡು ರಿಯಲ್‌ ಎಸ್ಟೇಟ್‌, ವಾಹನ ಮಾರಾಟ ಹಾಗೂ ಬಡ್ಡಿ ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ.

ಈ ಕೊಲೆಗೆ ರಿಯಲ್‌ ಎಸ್ಟೇಟ್‌ ಹಾಗೂ ಭೂ ವಿವಾದವೇ ಕಾರಣವೆಂದು ಶಂಕಿಸಲಾಗಿದೆ. ಈತ ಬಿಜೆಪಿ ಕಾರ್ಯಕರ್ತನೂ ಆಗಿದ್ದನೆಂದು ತಿಳದು ಬಂದಿದೆ. ಸುದ್ದಿ ತಿಳಿದ ಕೂಡಲೇ ನಗರ ಡಿವೈಎಸ್‌ಪಿ ವಿಜಯಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಶ್ವಾನದಳ, ಬೆರಳಚ್ಚು ತಜ್ಞರು ಸಹ ಪರಿಶೀಲನೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+