RSSಗೆ ಕಿರಿಕಿರಿಯಾಗುತ್ತಿರುವ ಮೋದಿ ಮಹೋದಯ್

RSS man Sanjay Joshi
ಅಹಮದಾಬಾದ್‌, ಅ. 10: ಮುಕುಟವಿಲ್ಲದ ಮಹಾರಾಜನಂತೆ ವರ್ತಿಸುತ್ತಿರುವ ಮುಖ್ಯಮಂತ್ರಿ ನರೇಂದ್ರ ಮೋದಿ ಇತ್ತಿಚಿನ ದಿನಗಳಲ್ಲಿ ರಾಜ್ಯದಲ್ಲಿ RSSಅನ್ನು ನಿರ್ಲಕ್ಷಿಸುತ್ತಾ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತಿರುವುದು ಬಹಿರಂಗ ಸತ್ಯ.

ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಮೋದಿಯನ್ನು ಬಿಂಬಿಸಲು RSS ಉತ್ಸುಕವಾಗಿದ್ದರೂ RSSಗೆ ಮೋದಿ ಮಣೆ ಹಾಕುತ್ತಿಲ್ಲ. ಈ ಬೆಳವಣಿಗೆಗೆಳ್ನು ಸೂಚ್ಯವಾಗಿ ಮೋದಿ ಗಮನಕ್ಕೂ ತಂದಿದೆ. ತನ್ಮೂಲಕ, ಸಂಘಟನೆಯ ಅಧಿಕಾರವನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಪರೋಕ್ಷವಾಗಿ ಎಚ್ಚರಿಸಿದೆ.

ಅಸಲಿಗೆ ಇತ್ತೀಚೆಗೆ ಮೋದಿ ಸದ್ಭಾವನೆ ಉಪವಾಸ ವ್ರತ ಕೈಗೊಳ್ಳುವ ಮುನ್ನ ಸೌಜನ್ಯಕ್ಕೂ ಆ ಬಗ್ಗೆ ಸಂಘ ಪರಿವಾರಿಗಳ ಜತೆ ಚರ್ಚಿಸಿಲ್ಲ. ಅದಾದ ನಂತರ ಅಡ್ವಾಣಿಯ ಜನಚೇತನ ಯಾತ್ರೆಗೆ ತೊಡಕಾಗಿರುವುದೂ 'ಸಂಘ'ಟಕರಿಗೆ ನುಂಗಲಾರದ ತುತ್ತಾಗಿದೆ.

ವಾಸ್ತವವಾಗಿ, ಅಡ್ವಾಣಿ ಯಾತ್ರೆ ಗುಜರಾತಿನಿಂದ ಆರಂಭವಾಗಬೇಕಿತ್ತು. ಆದರೆ ಮೋದಿ ವಿಮುಖರಾದ್ದರಿಂದ ಯಾತ್ರೆಗೆ ಬಿಹಾರದಿಂದ ಚಾಲನೆ ನೀಡಲು ನಿರ್ಧರಿಸಲಾಗಿದೆ.

ಸಂಘಟನೆಗೆ ಸಂಬಂಧಪಟ್ಟಂತೆ ಗುಜರಾತಿನಲ್ಲಿ ಏನೇ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದರೂ ಮೊದಲು ಆ ನಿರ್ಣಯಗಳನ್ನು ಮೋದಿ ಅನುಮೋದಿಸುವುದು ಅನಿವಾರ್ಯ ಎಂಬಂತಾಗಿದೆ.

ಈ ಮಧ್ಯೆ, ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಗೆ ಗೈರುಹಾಜರಾಗುವ ಮೂಲಕ ಉದ್ದಟತನ ತೋರಿರುವುದು RSSಗೆ ಬೇಸರವನ್ನುಂಟುಮಾಡಿದೆ. ಇದಕ್ಕೆ ಮೋದಿ ವಿರೋಧಿ ಸಂಜಯ್ ಜೋಶಿಗೆ RSS ಮಣೆ ಹಾಕಿದ್ದೂ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+