ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತಿಗಳ ಕಲಹಕ್ಕೆ ಭೈರಪ್ಪ ಅವರೇ ಆಹಾರ

By Mahesh
|
Google Oneindia Kannada News

SL Bhyrappa
ಬೆಂಗಳೂರು, ಅ.9: ಲೇಖಕ ಎಸ್.ಎಲ್. ಭೈರಪ್ಪರಿಗೆ ಜ್ಞಾನಪೀಠ ಪುರಸ್ಕಾರ ನೀಡಬೇಕು, ನೀಡಬಾರದು ಎಂಬ ವಿಷಯ ಮತ್ತೊಮ್ಮೆ ಚರ್ಚೆ, ಟೀಕೆ, ವಿವಾದಕ್ಕೆ ಈಡಾಗಿದೆ.

ಭೈರಪ್ಪ ಅವರಿಗೆ 'ಮರಣೋತ್ತರ" ಜ್ಞಾನಪೀಠ ಪ್ರಶಸ್ತಿಯೇ ಸೂಕ್ತ ಎಂದು ನಿಡುಮಾಮಿಡಿ ಶ್ರೀಗಳು ನೀಡಿರುವ ಹೇಳಿಕೆ ವಿರುದ್ಧ ಪರ ವಿರೋಧ ಅಭಿಪ್ರಾಯಗಳು ಕನ್ನಡ ಸಾಹಿತ್ಯ ಲೋಕದಿಂದ ಹರಿದು ಬಂದಿದೆ.

ಸಮತಾ ಸೈನಿಕ ದಳ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹಾಗೂ ಪಂಪ ಪ್ರಶಸ್ತಿ ಪುರಸ್ಕೃತ ಪ್ರೊ.ಚಂದ್ರಶೇಖರ ಪಾಟೀಲರನ್ನು ಅಭಿನಂದಿಸಿದ ಸಂತಸದ ಕ್ಷಣದಲ್ಲಿ ನಿಡುಮಾಮಿಡಿ ಶ್ರೀಗಳು ಅನಗತ್ಯವಾಗಿ ಭೈರಪ್ಪ ಅವರ ವಿಷಯ ಪ್ರಸ್ತಾಪಿಸಿ, ಟೀಕಿಸಿದ್ದಾರೆ.

ಸಮಾನತೆ ಮತ್ತು ಮಾನವೀಯ ವೌಲ್ಯಗಳ ಬಗ್ಗೆ ತಿರಸ್ಕಾರ ಹೊಂದಿರುವ ಭೈರಪ್ಪ, ಮನುಷ್ಯ ವಿರೋಧಿ. ಆದುದರಿಂದ ಅವರಿಗೆ ಪ್ರತಿಷ್ಠಿತ ಜ್ಞಾನಪೀಠ ನೀಡಬಾರದು ಎಂದು ಸ್ವಾಮೀಜಿ ಹೇಳಿದ್ದಾರೆ.

ಪತ್ರಕರ್ತ ಅಗ್ನಿ ಶ್ರೀಧರ್, ಲೇಖಕ ಭೈರಪ್ಪ ಯಾವುದೇ ರೀತಿಯಿಂದಲೂ ಜ್ಞಾನಪೀಠಕ್ಕೆ ಅರ್ಹರಲ್ಲ. ತಮ್ಮ ಕುಶಲತೆಯನ್ನು ಬಳಸಿಕೊಂಡು ಪ್ರಗತಿ ವಿರೋಧಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಆದರೆ, ಕಲೆ-ಸಾಹಿತ್ಯ ಮನುಷ್ಯನ ಬದುಕಿನ ನಕ್ಷೆಯಾಗಬೇಕು. ಭೈರಪ್ಪರ ಸಾಹಿತ್ಯದಲ್ಲಿ ಮನುಷ್ಯತ್ವದ ಸುಳಿವಿಲ್ಲ ಎಂದು ಟೀಕಿಸಿದ್ದಾರೆ.

ಆದರೆ, ಭೈರಪ್ಪ ಅವರ ನಿಂತಿರುವ ಸಾಹಿತಿಗಳು ಏನು ಹೇಳುತ್ತಾರೆ? ಮುಂದೆ ಓದಿ...

English summary
Nidumamidi Seer Veerabhadrachannamalla Swamiji lashes out at popular Kannada writer SL Bhyrappa and said he is suitable for getting Jnanpith posthumously. Journalist Agni Sridhar also condemned SL Bhyrappa. However, many Kannada writers critised Nidumamidi seer and Agi Sridhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X