ಚಂಚಲಗೂಡ ಜೈಲು ರೆಡ್ಡಿಗೆ ಕಾರಾಗೃಹ ಅಲ್ಲ ಸಿಹಿಗೃಹ!

ವಿಜಯದಶಮಿ ನಿಮಿತ್ತ ಗುರುವಾರ ಚಂಚಲಗುಡಾ ಜೈಲಿನಲ್ಲಿ ವಿಶೇಷ ಸಿಹಿತಿನಿಸು ಮತ್ತು ಮಾಂಸದೂಟ ಏರ್ಪಡಿಸಲಾಗಿತ್ತು. ರೆಡ್ಡಿದ್ವಯರು ಲಾಡು ಮತ್ತು ಕಾಲು ಕೆಜಿಯಷ್ಟು ಚಿಕನ್ ಕರಿ ಸವಿದರೆಂದು ಮೂಲಗಳು ತಿಳಿಸಿವೆ.
ಜೈಲಿನ ಮಾಮೂಲಿ ಊಟ ತಿಂದು ಬೇಸತ್ತಿರುವ ಜನಾರ್ದನ ರೆಡ್ಡಿಗೆ ಈ ದಿನ ನೀಡಿದ ಸಿಹಿ ಮತ್ತು ಮಾಂಸದೂಟ ಹಿಡಿಸಿತು ಎಂದು ಮೂಲಗಳು ಹೇಳಿವೆ. ಈ ಮಧ್ಯೆ, ಜನಾ ರೆಡ್ಡಿ ನ್ಯಾಯಾಂಗ ಬಂಧನ ಅವಧಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಅಕ್ಟೋಬರ್ 17ರವರೆಗೆ ವಿಸ್ತರಿಸಿದೆ.











Click it and Unblock the Notifications