ಡಿವಿಎಸ್ ಭರವಸೆ : ಉಪವಾಸ ಕೈಬಿಟ್ಟ ಶ್ರೀರಾಮುಲು

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮುಲು, ಕೊಪ್ಪಳ ವಿಧಾನಸಭಾ ಉಪ ಚುನಾವಣೆಯ ನಂತರ ಸ್ಪಾಂಜ್ ಐರನ್ ಘಟಕಗಳ ಬೇಡಿಕೆಯನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ 6 ದಿನಗಳಿಂದ ಸರದಿ ಉಪವಾಸ ಸತ್ಯಾಗ್ರಹ ಪ್ರತಿಭಟನೆ ನಡೆಸುತ್ತಿದ್ದ ಸ್ಪಾಂಜ್ ಐರನ್ ಘಟಕಗಳ ಮಾಲೀಕರು, ಕಾರ್ಮಿಕರು ಮತ್ತು ಅಧಿಕಾರಿಗಳು ಸೋಮವಾರ ಮಧ್ಯಾಹ್ನದಿಂದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ ಎಂದು ಘೋಷಿಸಿದರು.
ಕರ್ನಾಟಕ ಸ್ಪಾಂಜ್ ಐರನ್ ಓರ್ ಘಟಕಗಳ ರಾಜ್ಯಾಧ್ಯಕ್ಷ ಶ್ರೀನಿವಾಸ್ ಅವರು ಮಾತನಾಡಿ, ಕೊಪ್ಪಳ ವಿಧಾನಸಭಾ ಉಪ ಚುಣಾವಣೆಯ ನಂತರ ಮುಖ್ಯಮಂತ್ರಿಗಳು ತಮ್ಮ ಸಹಾಯಕ್ಕೆ ಬರದೇ ಇದ್ದಲ್ಲಿ ಪುನಃ ಪ್ರತಿಭಟನೆ ನಡೆಸಲಾಗುತ್ತದೆ. ಈವರೆಗೆ ಪ್ರತಿಭಟನೆಗೆ ಸಹಕಾರ ನೀಡಿ ಯಶಸ್ವಿಗೊಳಿಸಲು ನೆರವಾದ ಎಲ್ಲರಿಗೂ ಸಂಘಟನೆ ಕೃತಜ್ಞತೆಗಳನ್ನು ಸಲ್ಲಿಸುತ್ತದೆ, ಧನ್ಯವಾದಗಳನ್ನು ಹೇಳುತ್ತದೆ ಎಂದರು.











Click it and Unblock the Notifications