Get Updates
Get notified of breaking news, exclusive insights, and must-see stories!

ರೆಡ್ಡಿ ಆಪ್ತ ಶಾಸಕ ಸುರೇಶ್ ಬಾಬು ಮೇಲೆ ಸಿಬಿಐ ಕಣ್ಣು

Kampli MLA Suresh Babu
ಬಳ್ಳಾರಿ, ಸೆ.19: ಜನಾರ್ದನ ರೆಡ್ಡಿ ಅವರ ರಿಪಬ್ಲಿಕ್ ಆಫ್ ಬಳ್ಳಾರಿಯ ಮುಖ್ಯ ಸೇನಾನಿಗಳಲ್ಲಿ ಕಂಪ್ಲಿ ಶಾಸಕ ಟಿಎಚ್ ಸುರೇಶ್ ಬಾಬು ಕೂಡಾ ಒಬ್ಬರು. ಅಸೆಂಬ್ಲಿಯಲ್ಲಿ ರೆಡ್ಡಿ ಪರ ಎದ್ದು ನಿಂತು ತೋಳು ಮಡಿಚಿ ಸಿದ್ದರಾಮಯ್ಯ ವಿರುದ್ಧ ಯುದ್ಧಕ್ಕೆ ನಿಂತ ಧೀರ.

ವಸೂಲಿ ದಂಧೆಯಿಂದ ಹಿಡಿದು, ಬಂದ ಹಣವನ್ನು ಯಾವ ರೀತಿ, ಎಲ್ಲಿಗೆ, ಹೇಗೆ ಸಾಗಿಸಬೇಕು ಎಂಬ ಲೆಕ್ಕಾಚಾರವನ್ನು ಥಟ್ಟನೆ ಹೇಳಿಬಿಡುತ್ತಿದ್ದ ಅಲಿಖಾನ್ ಗೆ ಸುರೇಶ್ ಬಾಬು ಸಾಥ್ ಇದ್ದೇ ಇರುತ್ತಿತ್ತು. ಈ ಕಿಲಾಡಿ ಜೋಡಿ, ರೆಡ್ಡಿ ದಂಧೆಯ ಸಕಲ ನಿರ್ವಹಣೆ ಹೊಣೆ ಹೊತ್ತ ಸೇನಾನಿಗಳಾಗಿದ್ದಾರೆ.

ವಿದೇಶದಲ್ಲಿ ಹೇಗೆ ಹಣ ತೊಡಗಿಸಬೇಕು ಎಂಬುದನ್ನು ಕೂಡ ಹೇಳಿಕೊಡುತ್ತಿದ್ದ ಅಲಿಖಾನ್ ಒಂದು ರೀತಿ ದೇಶಿ, ವಿದೇಶಿ ವ್ಯವಹಾರ ಖಾತೆ ಸಚಿವನಂತೆ ಇದ್ದ. ಅಲಿ ವ್ಯವಹಾರ ಜ್ಞಾನ, ಶ್ರೀರಾಮುಲು ಸಂಬಂಧಿ ಶಾಸಕ ಸುರೇಬ್ ಬಾಬು ತೋಳ್ಬಲ ರೆಡ್ಡಿ ಸಾಮ್ರಾಜ್ಯಕ್ಕೆ ಸದಾ ಶ್ರೀರಕ್ಷೆ ಒದಗಿಸುತ್ತಿತ್ತು.

ಮನಿ ಲಾಂಡರಿಂಗ್ ಕೇಸ್ ಭೀತಿ: ಬಳ್ಳಾರಿ ಅಧಿಕಾರಿಗಳು ಫೋನ್ ಇಟ್ಟುಕೊಂಡು ಥರ ಥರ ನಡುಗುತ್ತಿದ್ದಾರೆ ಇಲ್ಲ ಅಲಿಖಾನ್‌ ಅಥವಾ ಸುರೇಶ್ ಬಾಬು ಕರೆ ಮಾಡಿದ್ದಾರೆ ಎಂದರ್ಥ. ಗಣಿ ಉದ್ಯಮಕ್ಕೆ ಸಂಬಂಧಿಸಿದಂತೆ ರೆಡ್ಡಿಯ ಎಲ್ಲಾ ಹೊರ ಹೋಗುವ ಕರೆಗಳು ಹಾಗೂ ಒಳಬರುವ ಕರೆಗಳನ್ನು ಅಲಿ ನಿರ್ವಹಿಸುತ್ತಿದ್ದ.

ರೆಡ್ಡಿಗಳ ವಿದೇಶಿ ಕಂಪನಿಗಳಿಗೆ ಅಕ್ರಮ ಅದಿರು ಸಾಗಾಟದಿಂದ ಹಿಡಿದು ವಿದೇಶಿ ಹಣ ಬದಲಾವಣೆ ಅಕ್ರಮದ ಬಗ್ಗೆ ಕೂಡಾ ತನಿಖೆ ನಡೆಯುವ ಸಂಭವವಿದೀ. ಈ ಬಗ್ಗೆ ಜಾರಿ ನಿರ್ದೇಶನಾಲಯ ಇನ್ನೂ ಆಸಕ್ತಿ ವಹಿಸಿಲ್ಲ.

ಅಂತಾರಾಷ್ಟ್ರೀಯ ಹೊಟೇಲ್‌ ಉದ್ಯಮ ಸಂಸ್ಥೆಯೊಂದರಿಂದ ಬಳ್ಳಾರಿಯಲ್ಲಿ ಬೃಹತ್‌ ಹೊಟೇಲ್‌ ನಿರ್ಮಾಣಕ್ಕೂ ಸಿದ್ಧತೆ ನಡೆಸಿದ್ದ ಅಲಿ, ವಿದೇಶಿ ಕಂಪನಿಗಳೊಡನೆ ಆರ್ಥಿಕ ವ್ಯವಹಾರ ನಡೆಸಿದ್ದ. ಕಳೆದ ವರ್ಷ ಅಕ್ಟೋಬರ್‌ 25 ರಂದು ಆದಾಯ ತೆರಿಗೆ ಅಧಿಕಾರಿಗಳು ರೆಡ್ಡಿ ಕಾಲೋನಿಯಲ್ಲಿರುವ ಈತನ ಮನೆ ಮೇಲೆ ದಾಳಿ ನಡೆಸಿದಾಗ 800 ಕೋಟಿ ರೂ.ಗೂ ಹೆಚ್ಚು ನಗದು ಹಣ ದೊರಕಿತ್ತು ಎಂದು ಆದಾಯ ಇಲಾಖೆಯ ಮೂಲಗಳು ಹೇಳುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+