ಲೋಕಾಯುಕ್ತ ಬಲೆಗೆ ಬಿದ್ದ ಕುಶಾಲನಗರ ಡಿವೈಎಸ್ಪಿ ನಾರಾಯಣ
ಮೈಸೂರು,
ಸೆ. 18: ಮಡಿಕೇರಿಯ ಕಾರುಣ್ಯ ಟ್ರಸ್ಟಿಗೆ ಸಂಬಂಧಿಸಿದ ಭೂವಿವಾದ ಪ್ರಕರಣದಿಂದ ಪಾರು ಮಾಡಲು ಟ್ರಸ್ಟಿಯೊಬ್ಬರಿಂದ 25,000 ರುಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಕುಶಾಲನಗರ ಡಿವೈ ಎಸ್ಪಿ ನಾರಾಯಣ್ರನ್ನು ಮೈಸೂರು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. id="toptextpromo">ಭಾನುವಾರ
ಬೆಳಗ್ಗೆ ಪೊಲೀಸ್ ಸಮವಸ್ತ್ರದಲ್ಲಿ, ಇಲಾಖೆಯ ಜೀಪಿನಲ್ಲಿ ಮೈಸೂರಿನ 'ಅರಮನೆ ಕೆಫೆ" ಹೊಟೇಲ್ಗೆ ಬಂದ ಡಿವೈ ಎಸ್ಪಿ ನಾರಾಯಣ್ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇದರೊಂದಿಗೆ ನಾರಾಯಣ್ ಜಾಮೀನು ರಹಿತ ಬಂಧನಕ್ಕೊಳಗಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮೋಹನ್ಕುಮಾರ್
ಅವರ ಲಿಖಿತ ದೂರನ್ನು ದಾಖಲಿಸಿಕೊಂಡ ಲೋಕಾಯುಕ್ತ ಡಿವೈಎಸ್ಪಿ ಪಾಟೀಲ್ ಹಾಗೂ ಜಯರಾಂರ ನೇತೃತ್ವದ ಲೋಕಾಯುಕ್ತ ಪೊಲೀಸರು ರವಿವಾರ ಈ ಕಾರ್ಯಾಚರಣೆ ನಡೆಸಿದ್ದಾರೆ.











Click it and Unblock the Notifications