ಗಾಂಧಿನಗರ ಪ್ರದೇಶಕ್ಕೆ ದೊಡ್ಡ ಗೌಡರ ಭೇಟಿ

ಅಲ್ಲಿದ್ದ ಸುಮಾರು 2500 ಮನೆಗಳ ತೆರವಿಗೆ ಕಂದಾಯ ಇಲಾಖೆ ನೋಟೀಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದ ದೇವೇಗೌಡರು ಸ್ಥಳಿಯರೊಂದಿಗೆ ನಡೆಸಿದ ಮಾತುಕತೆ, ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಾಗಿದೆ.
ದೇವೇಗೌಡರ ಭೇಟಿಯೆಂದರೆ ಎಲ್ಲರಿಗೂ ಕುತೂಹಲ ಸಹಜ. 24 ಗಂಟೆಗಳೂ ರಾಜಕೀಯವನ್ನೇ ಉಸಿರಾಡುವ ದೇವೇಗೌಡ್ರು ಎಲ್ಲಿ ಹೋದರೂ ಜನರ ಕಣ್ಣುಗಳು ಹಿಂಬಾಲಿಸಿವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ದೊಡ್ಡಗೌಡರ ಈ ಭೇಟಿಯ ಲಾಭ ಅಲ್ಲಿನ ಜನರಿಗೆ ಲಭ್ಯವಾಗಲಿದೆಯೇ ಅಥವಾ ಕಂದಾಯ ಇಲಾಖೆಯ ಕಾರ್ಯ ಮುಂದುವರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಷ್ಟೇ!












Click it and Unblock the Notifications