ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲಿಗೆ ನೀರು ಸೇರಿಸುತ್ತಿದ್ದ ಬಂಕ್ ಬಂದ್

By * ರೋಹಿಣಿ ಬಳ್ಳಾರಿ
|
Google Oneindia Kannada News

Water added to petrol
ಬಳ್ಳಾರಿ, ಸೆ. 15 : ಡೀಸೆಲ್‌ನಲ್ಲಿ ನೀರು ಸೇರಿಸಿ ವಾಹನಗಳಿಗೆ ಹಾಕುವ ಮೂಲಕ ವಾಹನಗಳ ಇಂಜಿನ್ ದುರವಸ್ತೆಗೆ ಕಾರಣವಾಗುತ್ತಿದ್ದ ನಗರದ ಅನಂತಪುರ ರಸ್ತೆಯ ಹೀರೋಹೋಂಡಾ ಶೋರೂಂ ಮುಂದಿನ ಶ್ರೀವಿಷ್ಣು ಎಂಟರ್‌ಪ್ರೈಸಸ್ ಪೆಟ್ರೋಲ್ ಬಂಕ್ ಅನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಬುಧವಾರ ರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಪೆಟ್ರೋಲ್‌ ಬಂಕ್‌ನಲ್ಲಿ ನೀರನ್ನು ಸೇರಿಸಿ ಪೆಟ್ರೋಲ್ ಮಾರಾಟ ಮಾಡುವ ವ್ಯವಹಾರ ಅನೇಕ ವರ್ಷಗಳಿಂದಲೇ ನಡೆಯುತ್ತಿದ್ದರೂ ಕೂಡ ಬಂಕ್‌ನ ಮಾಲೀಕರು ರಾಜಕೀಯವಾಗಿ - ಆರ್ಥಿಕವಾಗಿ ಬಲಾಢ್ಯರಾಗಿದ್ದ ಕಾರಣ ಯಾರೊಬ್ಬರೂ ದೂರು ದಾಖಲು ಮಾಡಿರಲಿಲ್ಲ.

ಆದರೆ, ಬುಧವಾರ ಸಂಜೆ ವಾರ್ತಾ ಇಲಾಖೆಯ ವಾಹನಕ್ಕೆ 75 ಲೀಟರ್ ಡೀಸೆಲ್ ಹಾಕಿಸಿದಾಗ ವಾಹನ ಒಂದು ಫರ್ಲಾಂಗ್ ದೂರವಷ್ಟೇ ಸಾಗಿ ಇಂಜಿನ್ ಸೀಜ್ ಆಗಿತ್ತು. ವಾರ್ತಾಧಿಕಾರಿ ಶ್ರೀನಿವಾಸ್ ಕೂಡಲೇ ಮೆಕ್ಯಾನಿಕ್‌ಗಳನ್ನು ಕರೆಯಿಸಿ ಇಂಜಿನ್ ತೋರಿಸಿದಾಗ, ಡೀಸಲ್‌ನಲ್ಲಿ ನೀರು ಸೇರಿಸಿ ಮಾರಾಟ ಮಾಡಿರುವ ದಂಧೆ ಬಯಲಿಗೆ ಬಂದಿದೆ.

ಶ್ರೀನಿವಾಸ್ ಕೂಡಲೇ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿ ಮಂಜುನಾಥ್ ಮತ್ತು ಬಸವರಾಜ ಅವರಿಗೆ ದೂರು ಸಲ್ಲಿಸಿದಾಗ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಡೀಸೆಲ್ ಅನ್ನು ಪರಿಶೀಲಿಸಿದಾಗ ಡೀಸಲ್‌ನಲ್ಲಿ ನೀರಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಅಧಿಕಾರಿಗಳು ಶ್ರೀನಿವಾಸ್ ಅವರಿಂದ ಲಿಖಿತ ದೂರನ್ನು ಪಡೆದು, ಬಂಕ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

English summary
A petrol bunk belonging to Srivishnu Enterprises has been seized by Food and Civil Supplies department for adding water to Petrol and Diesel in Bellary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X