ಮಹಾರಾಷ್ಟ್ರ ಕೇಡರಿನ ಖಡಕ್ ಐಪಿಎಸ್ ಅಧಿಕಾರಿ ಲಕ್ಷ್ಮಿನಾರಾಯಣ

ಸಾದಸೀದಾ ಅಧಿಕಾರಿ. ಮೂಲತಃ ಇಂಜಿನಿಯರ್ ಆದರೂ ಕಾನೂನನ್ನು ಚೆನ್ನಾಗಿ ಅರಿದು ಕುಡಿದಿದ್ದಾರೆ. ಇವರು ಇದುವರೆಗೆ ಕೈ ಹಾಕಿರುವುದೆಲ್ಲ ಘಟಾನುಘಟಿಗಳ ಬುಡಕ್ಕೆ. ಇಂತಿಪ್ಪ ಲಕ್ಷ್ಮಿನಾರಾಯಣ ಹುಟ್ಟಿ ಬೆಳೆದಿದ್ದು ಕರ್ನೂಲು ಜಿಲ್ಲೆಯ ಶ್ರೀಶೈಲಂನಲ್ಲಿ.
ಇವರಪ್ಪ ಸರಕಾರಿ ಇಂಜಿನಿಯರ್. ಲಕ್ಷ್ಮಿನಾರಾಯಣರೂ ವಾರಂಗಲ್ ರೀಜನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಬಿಇ ಮಾಡಿದ್ದಾರೆ. ಬಿಇ ಮುಗಿಸುತ್ತಿದ್ದಂತೆ ಐಪಿಎಸ್ ಅಧಿಕಾರಿಯಾದರು.
ಮಹಾರಾಷ್ಟ್ರದ ನಾಂದೇಡ್ ನಲ್ಲಿ ಎಸ್ ಪಿ ಯಾಗಿ ಸಾಕಷ್ಟು ಹೆಸರು ಗಳಿಸಿದರು. ಅಲ್ಲಿಂದ ಮುಂದೆ ಮಹಾರಾಷ್ಟ್ರ ಎಟಿಎಸ್ ತಂಡ ಸೇರಿದರು. ಆದರೆ ಅದೆಲ್ಲ ಅವರಿಗೆ ರುಚಿಸಲಿಲ್ಲ. ಸೀದಾ ಸಿಬಿಐ ಬಾಗಿಲು ಬಡಿದರು. ಸಿಬಿಐ ಸಹ ಿವರಿಗೆ ತುಂಬು ತೋಳಿನ ಸ್ವಾಗತ ಕೋರಿತು.












Click it and Unblock the Notifications