ನಾನು ನಿಜಕ್ಕೂ ದಿನಗೂಲಿ ನೌಕರನೇ: ಸಿಎಂ ಸದಾನಂದ

'ನಾನು ಹೇಳಬೇಕಾಗಿದ್ದನ್ನು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅಷ್ಟರ ಮಟ್ಟಿಗೆ ನನ್ನ ಕೆಲಸವನ್ನು ಹಗುರ ಮಾಡಿದ್ದಾರೆ' ಎಂದಿರುವ ಸದಾನಂದ ಗೌಡರು, 'ಕನ್ನಡ ನಾಡಿನ ಮಹಾಪ್ರಜೆಗಳ ಸೇವೆ ಮಾಡುವುದು ನನ್ನ ಸುಕೃತ. 'ದಿನಗೂಲಿ ಹುದ್ದೆ' ಸಂತಸ ತಂದಿದೆ. ಕುಮಾರಸ್ವಾಮಿಗಳು ಹೇಳಿದಂತೆ ಅದನ್ನು ದಿನಗೂಲಿ ಲೆಕ್ಕದಲ್ಲಿ ಮಾಡುತ್ತಿರುವುದಕ್ಕೆ ನನಗೆ ಮಹಾ ಸಂತೋಷವಾಗಿದೆ' ಎಂದು ಅವರು ಸದಾನಂದಗೊಂಡಿದ್ದಾರೆ.
ಕೋಮುಸೌಹಾರ್ದ ಮಸೂದೆಗೆ ವಿರೋಧ: ಇದೇ ವೇಳೆ ಕೋಮುಸೌಹಾರ್ದ ಮಸೂದೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸದಾನಂದ ಗೌಡ ಅವರು, ಮಸೂದೆ ಸಂಪೂರ್ಣ ಅವೈಜ್ಞಾನಿಕ. ಬಹುಸಂಖ್ಯಾತರ ಮೇಲೆ ಗದಾಪ್ರಹಾರವಾಗಲಿದೆ. ಮಸೂದೆ ಜಾರಿ ಮಾಡುವುದು ಅಸಾಧ್ಯ. ಕರ್ನಾಟಕದಲ್ಲಿ ಅದನ್ನು ಜಾರಿಗೊಳಿಸುವುದಕ್ಕೆ ನಾನು ವಿರೋಧಿಸುತ್ತೇನೆ' ಎಂದು ಹೇಳಿದ್ದಾರೆ.












Click it and Unblock the Notifications