ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ನಿಜಕ್ಕೂ ದಿನಗೂಲಿ ನೌಕರನೇ: ಸಿಎಂ ಸದಾನಂದ

By Srinath
|
Google Oneindia Kannada News

ಬೆಂಗಳೂರು, ಸೆ.11: ನಾನು ನಿಜಕ್ಕೂ ದಿನಗೂಲಿ ನೌಕರನೇ ಸರಿ. ನಾಡಿನ 6.5 ಕೋಟಿ ಜನರ ವಿನಮ್ರ ಸೇವಕ ಎಂದು ಮುಖ್ಯಮಂತ್ರಿ ಸದಾನಂದ ಗೌಡ ಅವರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಸೋಮವಾರ ತಿರುಗೇಟು ನೀಡಿದ್ದಾರೆ. ಡಿವಿ ಸದಾನಂದ ಗೌಡರು ದಿನಗೂಲಿ ಮುಖ್ಯಮಂತ್ರಿ ಎಂದು ಎಚ್‌ಡಿಕೆ ಭಾನುವಾರ ಲೇವಡಿ ಮಾಡಿದ್ದರು.

'ನಾನು ಹೇಳಬೇಕಾಗಿದ್ದನ್ನು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅಷ್ಟರ ಮಟ್ಟಿಗೆ ನನ್ನ ಕೆಲಸವನ್ನು ಹಗುರ ಮಾಡಿದ್ದಾರೆ' ಎಂದಿರುವ ಸದಾನಂದ ಗೌಡರು, 'ಕನ್ನಡ ನಾಡಿನ ಮಹಾಪ್ರಜೆಗಳ ಸೇವೆ ಮಾಡುವುದು ನನ್ನ ಸುಕೃತ. 'ದಿನಗೂಲಿ ಹುದ್ದೆ' ಸಂತಸ ತಂದಿದೆ. ಕುಮಾರಸ್ವಾಮಿಗಳು ಹೇಳಿದಂತೆ ಅದನ್ನು ದಿನಗೂಲಿ ಲೆಕ್ಕದಲ್ಲಿ ಮಾಡುತ್ತಿರುವುದಕ್ಕೆ ನನಗೆ ಮಹಾ ಸಂತೋಷವಾಗಿದೆ' ಎಂದು ಅವರು ಸದಾನಂದಗೊಂಡಿದ್ದಾರೆ.

ಕೋಮುಸೌಹಾರ್ದ ಮಸೂದೆಗೆ ವಿರೋಧ: ಇದೇ ವೇಳೆ ಕೋಮುಸೌಹಾರ್ದ ಮಸೂದೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸದಾನಂದ ಗೌಡ ಅವರು, ಮಸೂದೆ ಸಂಪೂರ್ಣ ಅವೈಜ್ಞಾನಿಕ. ಬಹುಸಂಖ್ಯಾತರ ಮೇಲೆ ಗದಾಪ್ರಹಾರವಾಗಲಿದೆ. ಮಸೂದೆ ಜಾರಿ ಮಾಡುವುದು ಅಸಾಧ್ಯ. ಕರ್ನಾಟಕದಲ್ಲಿ ಅದನ್ನು ಜಾರಿಗೊಳಿಸುವುದಕ್ಕೆ ನಾನು ವಿರೋಧಿಸುತ್ತೇನೆ' ಎಂದು ಹೇಳಿದ್ದಾರೆ.

English summary
Karnataka Chief Minister DV Sadananda Gowda accepts he is a daily wager, and he is very happy about the job. Earlier former CM Kumaraswamy has dubed DV Sadananda Gowda as ‘daily wage CM’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X