ರೆಡ್ಡಿ ಜೈಲಿಗೆ, ಹಾಲು ಕುಡಿದಷ್ಟು ಸಂತೋಷ
ಕರ್ನಾಟಕ ಹಾಗೂ ಆಂಧ್ರಪದೇಶ ಗಡಿಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದನ್ನು ಸುಪ್ರೀಂಕೋರ್ಟ್ ನೇಮಿಸಿದ್ದ ಸಿಇಸಿ, ಸಿಬಿಐ ಹಾಗೂ ಲೋಕಾಯುಕ್ತ ವರದಿಗಳು ಬಹಿರಂಗಪಡಿಸಿವೆ.
ಆದರೂ, ರಾಜ್ಯ ಸರಕಾರ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ದೂರಿದರು.ಜನಾರ್ದನ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ಬಂಧನವು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದರು.
ಸಿಬಿಐ ಬಗ್ಗೆ ಅನುಮಾನ ಬೇಡ: ಸುಪ್ರೀಂ ನಿರ್ದೇಶನದ ಮೇರೆಗೆ ಸಿಬಿಐ ದಾಳಿ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನವಾಗಿದೆಯೆ ಹೊರತು, ಕೇಂದ್ರ ಸರಕಾರದ ಕುಮ್ಮಕ್ಕಿನಿಂದಲ್ಲ ಎಂದು ಹಿರೇಮಠ್ ತಿಳಿಸಿದರು.
2
ಜಿ
ಸ್ಪೆಕ್ಟ್ರಂ,
ಓಟಿಗಾಗಿ
ನೋಟು
ಸೇರಿದಂತೆ
ಹಲವು
ಪ್ರಕರಣಗಳಲ್ಲಿ
ಸುಪ್ರೀಂಕೋರ್ಟ್
ನಿರ್ದೇಶನದ
ಮೇರೆಗೆ
ಸಿಬಿಐ
ಸಮರ್ಪಕವಾಗಿ
ತನ್ನ
ಕಾರ್ಯನಿರ್ವಹಿಸಿದೆ.
ಕಾಂಗ್ರೆಸ್,
ಬಿಜೆಪಿ
ಸೇರಿದಂತೆ
ಕೇಂದ್ರದಲ್ಲಿ
ಅಧಿಕಾರ
ನಡೆಸಿದ
ಎಲ್ಲ
ಪಕ್ಷಗಳು
ಸಿಬಿಐನ್ನು
ದುರಪಯೋಗಪಡಿಸಿಕೊಂಡಿರುವುದಕ್ಕೂ
ಹಲವು
ಉದಾಹರಣೆಗಳಿವೆ
ಎಂದು
ಅವರು
ಹೇಳಿದರು.