ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀರಾಮುಲು, ಕರುಣಾ ಮನೆ ಮೇಲೆ ಸಿಬಿಐ ದಾಳಿ

By Mahesh
|
Google Oneindia Kannada News

CBI raids B Sriramulu house in Bangalore
ಬೆಂಗಳೂರು, ಸೆ.5: ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಕರುಣಾಕರ ರೆಡ್ಡಿ ಅವರ ಬೆಂಗಳೂರಿನ ನಿವಾಸಗಳ ಮೇಲೆ ಸಿಬಿಐ ತಂಡ ದಾಳಿ ನಡೆಸಿದೆ.

ನಗರದ ವಿಂಡ್ಸರ್ ಮ್ಯಾನರ್ ಹೋಟೆಲ್ ಸಮೀಪದ ಸೆವೆನ್ ಮಿಸ್ಟರ್ ಕ್ವಾಟರ್ಸ್ ನಲ್ಲಿರುವ ಮಾಜಿ ಸಚಿವ ಶ್ರೀರಾಮುಲು ಹಾಗೂ ಕರುಣಾಕರ ರೆಡ್ಡಿ ಅವರ ನಿವಾಸದ ಮೇಲೆ ಸಿಬಿಐ ಹೆಚ್ಚುವರಿ ಎಸ್ಪಿ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸಿಬಿಐ ತಂಡ ಹಲವಾರು ದಾಖಲೆಗಳನ್ನು ಪರಿಶೀಲಿಸಿ, ವಶಪಡಿಸಿಕೊಂಡಿದೆ.

ರಾಮುಲು ಬೆಟ್ಟ ಚಾರಣ : ಈ ಮಧ್ಯೆ ಮೈಸೂರಿನಲ್ಲಿ ಬಿಗಿ ಭದ್ರತೆ ನಡುವೆ ಚಾಮುಂಡಿ ಬೆಟ್ಟ ಹತ್ತುತ್ತಿರುವ ಶ್ರೀರಾಮುಲು ಅವರು ತಮ್ಮ ನಿವಾಸದ ಮೇಲೆ ನಡೆದಿರುವ ಸಿಬಿಐ ದಾಳಿಯ ಬಗ್ಗೆ ಪ್ರತಿಕ್ರಿಯಿಸಲು ಯತ್ನಿಸಿದರೂ ನೆಟ್ ವರ್ಕ್ ಪ್ರಾಬ್ಲಂ ನಿಂದ ಸಾಧ್ಯವಾಗಿಲ್ಲ.

ಮಡಿಕೇರಿಗೆ ತೆರಳಿ ಸ್ಪೀಕರ್ ಬೋಪಯ್ಯ ಅವರಿಗೆ ರಾಜೀನಾಮೆ ಸಲ್ಲಿಸಿ ಬಂದ ನಂತರ ಸ್ವಾಭಿಮಾನ ಯಾತ್ರೆ ಆರಂಭಿಸುವುದಾಗಿ ಹೇಳಿದ್ದರು. ಈ ನಿಮಿತ್ತ ಬೆಟ್ಟದ ತಾಯಿ ಆಶೀರ್ವಾದ ಬೇಡಲು ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾರೆ.

'ನಮ್ಮ ಮನೇಲಿ ಏನು ಸಿಗಲ್ಲ, ವಿನಾಕರಣ ಆರೋಪ ಹೊರೆಸಿ ದಾಳಿ ನಡೆಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ಜನ ಬೆಂಬಲ ನಮಗಿದೆ, ಜನರನ್ನು ಅರೆಸ್ಟ್ ಮಾಡಲಿ ಬೇಕಾದರೆ' ಎಂದು ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.

English summary
CBI team lead by DSP Giri raids Sriramulu and Karunakara Redddy House in Bangalore. Meanwhile former minister Sri Ramulu is ascending Chamundi hills to seek blessing of deity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X