ಪಿಎಂ ಮತ್ತು ಸಂಪುಟ ಸಹೋದ್ಯೋಗಿಗಳ ಆಸ್ತಿ ಘೋಷಣೆ

ಪ್ರಧಾನಿ ಸಿಂಗ್ ಗಿಂತಲೂ ಹೆಚ್ಚು ಆಸ್ತಿ ಹೊಂದಿರುವ ಸಾಕಷ್ಟು ಸಂಪುಟ ಸಚಿವರು ಇದ್ದಾರೆ. ಇದರಲ್ಲಿ ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿ ಮಾಡುವ ಸಚಿವ ಕಮಲ್ ನಾಥ್ ಟಾಪ್ ಒನ್ ಸ್ಥಾನ ಪಡೆದಿದ್ದಾರೆ. ನಮ್ಮ ರಾಜ್ಯದ ಎಸ್ಎಂ ಕೃಷ್ಣ ಕಡಿಮೆ ಆಸ್ತಿ ಹೊಂದಿದ್ದಾರೆ. ಪ್ರಧಾನಿ ಆಸ್ತಿ ಕೆಲವು ಕೋಟಿ ರು.ಗಳಲ್ಲಿದೆ. ಯಾರ ಯಾರ ಆಸ್ತಿ ಎಷ್ಟೇಷ್ಟು? ಬನ್ನಿ ನೋಡೋಣ.
* ಗ್ರಾಮೀಣ ಅಭಿವೃದ್ಧಿ ಮಂತ್ರಿ ಕಮಲ್ ನಾಥ್ ಆಸ್ತಿ 263 ಕೋಟಿ ರುಪಾಯಿ ಆಗಿದ್ದು ಶ್ರೀಮಂತ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ.
* ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಆಸ್ತಿ ಮೊತ್ತ 5 ಕೋಟಿ ರುಪಾಯಿ. ಅವರು ಸುಮಾರು 1.8 ಕೋಟಿ ರು. ಮೊತ್ತದ ಸ್ವತ್ತು ಹೊಂದಿದ್ದಾರೆ. 90 ಲಕ್ಷ ರು. ಮೌಲ್ಯದ ಮನೆ ಚಂಡಿಗಢದಲ್ಲಿದೆ. ದೆಹಲಿಯ ವಸಂತ್ ಕುಂಜಿಯಲ್ಲಿರುವ ಅಪಾರ್ಟ್ ಮೆಂಟ್ ಬೆಲೆ 88 ಲಕ್ಷ ರುಪಾಯಿ.
* ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಆಸ್ತಿ ಮೊತ್ತ 1.8 ಕೋಟಿ ರುಪಾಯಿ. ಅವರು 62 ಲಕ್ಷ ರು. ಮೊತ್ತದ ಪ್ರಾಪರ್ಟಿ ಹೊಂದಿದ್ದಾರೆ. ಅವರ ಸ್ವತ್ತು ಮತ್ತು ಉಳಿತಾಯ ಖಾತೆಯಲ್ಲಿರುವ ಮೊತ್ತ 1.2 ಕೋಟಿ ರುಪಾಯಿ.
* ಕೇಂದ್ರ ಗೃಹಖಾತೆ ಹೊಂದಿರುವ ಪಿ ಚಿದಂಬರಂ ವೈಯಕ್ತಿಕ ಆಸ್ತಿ 11 ಕೋಟಿ ರುಪಾಯಿ. ಅವರ ಪತ್ನಿಯಲ್ಲಿರುವ ಆಸ್ತಿ ಮೊತ್ತ 12.8 ಕೋಟಿ ರುಪಾಯಿ.
* ರಕ್ಷಣಾ ಸಚಿವ ಎ ಕೆ ಆಂಟೊನಿ ವೈಯಕ್ತಿಕ ಆಸ್ತಿ ಮೊತ್ತ 1.8 ಕೋಟಿ ರುಪಾಯಿ. ಅವರ ಪತ್ನಿಯಲ್ಲಿರುವ ಆಸ್ತಿ ಮೌಲ್ಯ 30 ಲಕ್ಷ ರುಪಾಯಿ.
* ಕೃಷಿ ಸಚಿವ ಶರದ್ ಪವರ್ ಆಸ್ತಿ ಮೊತ್ತ 12 ಕೋಟಿ ರುಪಾಯಿ. ಇದರಲ್ಲಿ ವಿವಿಧ ಕಂಪನಿಗಳಲ್ಲಿನ ಹೂಡಿಕೆ ಮತ್ತು ಷೇರುಗಳು ಸೇರಿವೆ.
* ಪೆಟ್ರೋಲಿಯಂ ಸಚಿವ ಮುರಲಿ ದೇವೂರ ಮತ್ತು ಅವರ ಪತ್ನಿಯ ಒಟ್ಟು ಆಸ್ತಿ ಮೊತ್ತ 15.2 ಕೋಟಿ ರುಪಾಯಿ. ಇವರ ಪತ್ನಿ ಮೂರು ಕಂಪನಿಗಳನ್ನು ನಡೆಸುತ್ತಿದ್ದಾರೆ.
* ಜವಳಿಖಾತೆಯ ಮಾಜಿ ಮಂತ್ರಿ ದಯಾನಿಧಿ ಮಾರನ್ ಆಸ್ತಿ ಮೊತ್ತ 2.94 ಕೋಟಿ ರು. ಅವರು ಮತ್ತು ಅವರ ಪತ್ನಿ ರಿಲಯೆನ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ನಲ್ಲಿ ಷೇರು ಹೊಂದಿದ್ದಾರೆ.
ಅತ್ಯಂತ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿ ಯಾರು? ಅವರೇ ನಮ್ಮ ಕರ್ನಾಟಕದ ಎಸ್ಎಂ ಕೃಷ್ಣ. ಮುಂದಿನ ಪುಟ ನೋಡಿ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications