ಯಡಿಯೂರಪ್ಪ ಜೊತೆ ಉಪ್ಪು ತಿಂದವರ ಪಟ್ಟಿ

ಏನು ಆರೋಪ? : ಬೆಂಗಳೂರಿನ ಅರಕೆರೆ, ದೇವರಚಿಕ್ಕನಹಳ್ಳಿ ಮತ್ತು ಗೆದ್ದಲಹಳ್ಳಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ ಡಿನೋಟಿಫಿಕೇಷನ್ಗೆ ಸಂಬಂಧಿಸಿದ ಪ್ರಕರಣ.
ಇತರೆ ಆರೋಪಿಗಳು: ಬಿಎಸ್ ಯಡಿಯೂರಪ್ಪ ಮೊದಲ ಆರೋಪಿಯಾಗಿದ್ದು, ಇತರೆ 14 ಆರೋಪಿಗಳು ಇಂತಿದ್ದಾರೆ:
* ಶಿವಮೊಗ್ಗ ತಾಲ್ಲೂಕಿನ ಕುಂಸಿ ಹೋಬಳಿಯ ಎನ್.ಅಕ್ಕಮಹಾದೇವಿ,
* ಹೊನ್ನಾಳಿ ಪಟ್ಟಣದ ಎನ್.ಎಸ್.ಮಹಾಬಲೇಶ್ವರ,
* ಬೆಂಗಳೂರಿನ ಬಿಟಿಎಂ ಬಡಾವಣೆಯ ಸತ್ಯಕುಮಾರಿ,
* ದೊಮ್ಮಲೂರಿನ ಮೋಹನ್ ರಾಜ್,
* ಜೆ.ಪಿ.ನಗರ ಮೂರನೇ ಹಂತದ ವಿ.ಪ್ರಕಾಶ್,
* ದೇವರಚಿಕ್ಕನಹಳ್ಳಿಯ ಕಾಮಾಕ್ಷಮ್ಮ, * ಕುಂಸಿಯ ಎಂ.ಮಂಜುನಾಥ್,
* ಬೆಂಗಳೂರು ಜಯನಗರ 4ನೇ 'ಟಿ' ಬ್ಲಾಕ್ನ ವಿ.ಅನಿಲ್ಕುಮಾರ್,
* ಬನಶಂಕರಿ ಎರಡನೇ ಹಂತದ ಬಿ.ರಮೇಶ್, * ಗೆದ್ದಲಹಳ್ಳಿಯ ಶಾಂತಾ ದೇವಿ,
* ಫ್ರೇಜರ್ ಟೌನ್ನ ಶಾಂತಾ ಬಾಯಿ,
* ನ್ಯೂ ಬಂಬೂ ಬಜಾರ್ನ ಇಸ್ಮಾಯಿಲ್ ಷರೀಫ್,
* ಜಯನಗರ 4ನೇ 'ಟಿ' ಬ್ಲಾಕ್ನ ವಿ.ಮಂಜುನಾಥ್
* ಪುಟ್ಟೇನಹಳ್ಳಿಯ ಕೆ.ಶಿವಪ್ಪ
ವಕೀಲರು : ಯಡಿಯೂರಪ್ಪ ಪರ ವಕೀಲ ರವಿ ಬಿ.ನಾಯ್ಕ, ಸಿರಾಜಿನ್ ಬಾಷಾ ಪರ ವಕೀಲ ಸಿ.ಎಚ್.ಹನುಮಂತರಾಯ. ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್.
ಸ್ಥಳ: ಬೆಂಗಳೂರಿನ ಸಿವಿಲ್ ಕೋರ್ಟ್ ಕಟ್ಟಡ, ಲೋಕಾಯುಕ್ತ ವಿಶೇಷ ನ್ಯಾಯಾಲಯ.
ಸಮಯ : ಮಧ್ಯಾಹ್ನ 3 ರ ನಂತರ ತೀರ್ಪು ಏನಾಗಲಿದೆ. ಯಡಿಯೂರಪ್ಪಗೆ ಬಂಧನವೋ, ಜಾಮಿನೋ ಅಥವಾ ವಿಚಾರಣೆ ಮುಂದೂಡಲೋಗುವುದೋ, ಕಾದು ನೋಡಿ..
ಪೊಲೀಸ್ ಬಂದೋಬಸ್ತ್ : ಕೇಂದ್ರ ಡಿಸಿಪಿ ರಮೇಶ್ ನೇತೃತ್ವದಲ್ಲಿ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಯಡಿಯೂರಪ್ಪ ಬಂಧನವಾದರೆ ಉಂಟಾಗಬಹುದಾದ ಗಲಭೆ, ಘರ್ಷಣೆ ನಿಯಂತ್ರಿಸಲು ಕೋರ್ಟ್ ಆವರಣದಿಂದ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.












Click it and Unblock the Notifications