Get Updates
Get notified of breaking news, exclusive insights, and must-see stories!

ಲೋಕಪಾಲಕ್ಕಾಗಿ 1977ರಿಂದ ಶಾಂತಿ ಭೂಷಣ್ ಹೋರಾಟ

Shanti Bhushan
ನವದೆಹಲಿ, ಆ.28: ಅಣ್ಣಾ ಹಜಾರೆ ಅವರ ಪ್ರಬಲ ಜನ ಲೋಕಪಾಲ ಮಸೂದೆ ಕರಡು ರಚಿಸಿರುವ ಹಿರಿಯ ವಕೀಲ, ಕಾನೂನು ತಜ್ಞ ಶಾಂತಿ ಭೂಷಣ್ ಅವರು 1977 ರಿಂದ ಈ ಕಾಯ್ದೆಗಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ.

1977ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಶಾಂತಿ ಭೂಷಣ್ ಅವರು ಪ್ರಪ್ರಥಮ ಬಾರಿಗೆ ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದರು. 86 ವರ್ಷದ ಶಾಂತಿ ಭೂಷಣ್ ಅವರು ನ್ಯಾಯಾಂಗ ವ್ಯವಸ್ಥೆಯ ಭ್ರಷ್ಟಾಚಾರದ ವಿರುದ್ಧ ಬಂಡೆದ್ದವರು.

CJAR ಅಭಿಯಾನದ ಮೂಲಕ ಹೋರಾಟ ಮುಂದುವರೆಸಿರುವ ಶಾಂತಿ ಅವರು ಅಣ್ಣಾ ಅವರ ಆಶಯಕ್ಕೆ ತಕ್ಕಂತೆ ಜನ ಲೋಕಪಾಲ ಮಸೂದೆಯ ಕರಡನ್ನು ರಚಿಸಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಿದರು.

ಇಂದಿರಾಗಾಂಧಿ ವಿರುದ್ಧ ರಾಜ್ ನಾರಾಯಣ್ ಹೂಡಿದ್ದ ದಾವೆಯಲ್ಲಿ ಸಮರ್ಧವಾಗಿ ವಾದ ಮಂಡಿಸಿದ ಶಾಂತಿ ಭೂಷಣ್ ಅವರು ಜಯ ಗಳಿಸಿದರು. ಆದರೆ, ಇಂದಿರಾ ತಪ್ಪಿತಸ್ಥೆ ಎಂದು ಜಸ್ಟೀಸ್ ಜಗನ್ಮೋಹನ್ ಲಾಲ್ ಸಿಂಹ ಘೋಷಿಸುತ್ತಿದ್ದಂತೆ ಗಲಭೆ, ಗೊಂದಲ, ಘರ್ಷಣೆಗಳು ನಡೆದು ಕೊನೆಗೆ ದೇಶದಲ್ಲಿ ಎಮರ್ಜೆನ್ಸಿ ಡಿಕ್ಲೇರ್ ಆಗಿಬಿಟ್ಟಿದ್ದು ಇತಿಹಾಸ.

ಪ್ರಬಲ ಮಸೂದೆಗಾಗಿ ಹೋರಾಡುತ್ತಾ ಬಂದಿರುವ ಶಾಂತಿ ಭೂಷಣ್ ಅವರು ಟೀಂ ಅಣ್ಣಾ ಸೇರಿದ ಮೇಲೆ ಪ್ರಬಲ ಲೋಕಪಾಲ ರಚಿಸಿ ಜನೋಪಯೋಗಿ ಕಾರ್ಯವನ್ನು ಮುಂದುವರೆಸಿದ್ದಾರೆ. ಶಾಂತಿ ಭೂಷಣ್ ದೇಶಕ್ಕೆ ಭೂಷಣಪ್ರಾಯರಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+