ಅಕ್ರಮ ಗಣಿ ವೀರರಿಗೆ ಸಚಿವ ಸ್ಥಾನ: ಕಾನೂನಿಗೆ ಮೊರೆ

ಲೋಕಾಯುಕ್ತ ವರದಿಯಲ್ಲಿ ರೆಡ್ಡಿ ಸೋದರರ ಹೆಸರು ಪ್ರಸ್ತಾಪಿಸಿರುವ ಲೋಕಾಯುಕ್ತರು ಇವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿರುವಂತೆ ಸಲಹೆ ನೀಡಿದ್ದಾರೆ. ಆದರೆ ರೆಡ್ಡಿ ಸೋದರರು ಆರೋಪ ನಿರಾಕರಿಸಿ ಅರ್ಜಿ ನೀಡಿದ್ದಾರೆ. ಅದನ್ನು ಕಾನೂನು ತಜ್ಞರಿಗೆ ನೀಡಲಾಗಿದೆ.
ತಜ್ಞರ ವರದಿ ಪರಿಶೀಲಿಸಿದ ನಂತರ ಈ ವಿಷಯದಲ್ಲಿ ಪಕ್ಷ ಸ್ಪಷ್ಟ ನಿಲುವು ತೆಗೆದುಕೊಳ್ಳಲಿದೆ. ಹೀಗಾಗಿ ರೆಡ್ಡಿ ಸೋದರರಿಗೆ ಸ್ಥಾನ ಕಾದಿರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅವರು ತಿಳಿಸಿದರು.
ಉಳಿದ ಸಚಿವ ಸ್ಥಾನಗಳನ್ನು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುವುದು. ಜಿಲ್ಲಾವಾರು, ಜಾತಿವಾರು, ಪ್ರಾಂತ್ಯವಾರು ಪ್ರಾತಿನಿಧ್ಯ ನೀಡಬೇಕಾಗುತ್ತದೆ. ಈ ಬಗ್ಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.












Click it and Unblock the Notifications