ಬೇಗ ಎದ್ದೇಳು ಅಂದದ್ದಕ್ಕೆ ಯುವತಿ ಆತ್ಮಹತ್ಯೆ

BSc student commits suicide Bangalore
ಬೆಂಗಳೂರು, ಆಗಸ್ಟ್ 15: ಹರೆಯದ ಯುವಕ ಯುವತಿಯರಿಗೆ ಸಾಯಲು ಚಿಕ್ಕ ನೆಪಗಳು ಸಾಕಾಗುತ್ತದೆ. ಅಮ್ಮನ ಬೈಯ್ಗುಳ ಕೇಳಿ ರೋಸಿದ 21ರ ಹರೆಯದ ವಿದ್ಯಾರ್ಥಿನಿಯೊಬ್ಬಳು ನಿನ್ನೆ ನೇಣಿಗೆ ಕೊರಳೊಡ್ಡಿದ್ದಾಳೆ.

ಅಸಲಿಗೆ ನೇತ್ರಾವತಿಯ ಆತ್ಮಹತ್ಯೆಗೆ ಕಾರಣ ಅಮ್ಮನ ಬೈಯ್ಗುಳವಂತೆ. ನೇತ್ರಾ ದಿನಾ ಬೆಳಗ್ಗೆ ತಡವಾಗಿ ಎದ್ದೇಳುವ ಅಭ್ಯಾಸ ರೂಡಿಸಿಕೊಂಡಿದ್ದಳು ಎನ್ನಲಾಗಿದೆ. ಇದಕ್ಕೆ ಆಕೆಯ ತಾಯಿ ದಿನಾ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು.

ನಿನ್ನೆ ಭಾನುವಾರ. ರಜಾದಿನವಾಗಿರುವುದರಿಂದ ಹಾಸಿಗೆ ಬಿಟ್ಟು ನೇತ್ರ ಇನ್ನೂ ಎದ್ದಿರಲಿಲ್ಲ. ಆಗಲೇ ಅಮ್ಮನ ಬೈಯ್ಗುಳ ಆರಂಭವಾಗಿತ್ತು. ಇದರಿಂದ ಮನನೊಂದು ಕೊಠಡಿಯ ಫ್ಯಾನಿಗೆ ನೇಣು ಬಿಗಿದುಕೊಂಡು ಶಾಶ್ವತ ನಿದ್ದೆಗೆ ಜಾರಿದ್ದಾಳೆ.

ನೇತ್ರಾವತಿ ವಿಜಯ ಕಾಲೇಜಿನಲ್ಲಿ 3ನೇ ವರ್ಷದ ಬಿಎಸ್ಸಿ ಮಾಡುತ್ತಿದ್ದಳು. ಈಕೆಯ ತಂದೆ ಕೆಎಸ್ಆರ್ಪಿಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+