ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಿಐಡಿಗೆ ಬೇಕಾದ ಯೋಗೇಶ್ವರ್ ಗೆ ಸಚಿವ ಸ್ಥಾನ ಏಕೆ?
ಸಿಐಡಿ ಚಾರ್ಜ್ಶೀಟ್ ಎದುರಿಸುತ್ತಿರುವ ಚನ್ನಪಟ್ಟಣದ ಶಾಸಕ ಸಿಪಿ ಯೋಗೇಶ್ವರ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿರುವ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಅತೀವ ಅಸಮಾಧಾನ ಉಂಟಾಗಿದೆ.
" ಆರೋಪಿ ಸ್ಥಾನದಲ್ಲಿರುವ ಸಿ.ಪಿ ಯೋಗೇಶ್ವರನಿಗೆ ಸ್ಥಾನ ನೀಡುವುದಾದರೆ ಅದು ಪಕ್ಷದ ನಿಯಮ ಮುರಿದಂತೆ, ಅಕ್ರಮ, ಭ್ರಷ್ಟಾಚಾರದಲ್ಲಿ ತೊಡಗಿರುವವರು ಸಚಿವರಾಗಬಹುದಾದರೆ, ಯಡಿಯೂರಪ್ಪ ಅವರನ್ನು ಏಕೆ ಪಟ್ಟದಿಂದ ಕೆಳಗಿಳಿಸಬೇಕಿತ್ತು? " ಎಂದು ಪಕ್ಷದ ಕೆಲವು ನಿಷ್ಠಾವಂತ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಆದರೆ, ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ಗೆ ಸವಾಲು ಹಾಕಲೆಂದು ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಪಕ್ಷ ಮೂಲಗಳು ಹೇಳುತ್ತಿವೆ.
ಯೋಗೇಶ್ವರ 1995-2006ರ ಮಧ್ಯೆ ಖಾಸಗಿ ಟೌನ್ಶಿಪ್ಪೊಂದರಲ್ಲಿ ಸೈಟುಗಳನ್ನು ನೀಡುವುದಾಗಿ ಭಾರೀ ಸಂಖ್ಯೆಯ ಹೂಡಿಕೆದಾರರಿಗೆ 37 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಸಿಐಡಿ 2010ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿತ್ತು .
Comments
English summary
Minister CP Yogeshwar who has been named and charge sheeted by CID Police. Yogeshwar is facing illegal township distribution case. BJP made a mistake by giving cabinet ministry to Yogeshwar and asking Yeddyurappa to step down.
Story first published: Sunday, August 14, 2011, 19:43 [IST]