ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಕ್ರೈಂ ಬೀಟ್ : ಭದ್ರತಾ ಸಿಬ್ಬಂದಿ ಕೈ ಕಟ್

By Prasad
|
Google Oneindia Kannada News

Miscreants cut security guard hand in Bangalore
ಬೆಂಗಳೂರು, ಆ. 13 : ಬ್ಯಾಂಕ್ ಎಟಿಎಂನಲ್ಲಿ ಹಣ ಇಟ್ಟು ವಾಪಸ್ ಆಗುತ್ತಿದ್ದಾಗ, ಹಣ ದೋಚುವ ಯತ್ನದಲ್ಲಿ ದುಷ್ಕರ್ಮಿಗಳು ಬ್ಯಾಂಕ್ ಭದ್ರತಾ ಸಿಬ್ಬಂದಿಯ ಕೈಯನ್ನು ಕತ್ತರಿಸಿದ ಘಟನೆ ನಾಗರಭಾವಿಯ ಮೂಡಲಪಾಳ್ಯ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಜರುಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಎಟಿಎಂನಲ್ಲಿ ಹಣ ಜಮಾ ಮಾಡಿ ವಾಪಸ್ ಆಗುತ್ತಿದ್ದ ಸಮಯದಲ್ಲಿ ಈ ದುರ್ಘಟನೆ ಜರುಗಿದೆ. ವಾಹನದಲ್ಲಿ ಹಣ ಇರಬಹುದೆಂದು ತಿಳಿದ ದುಷ್ಕರ್ಮಿಗಳು ವಾಹನದಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಆಗಿರುವ ನಿವೃತ್ತ ಸೈನಿಕ ಚಂದ್ರಮೂರ್ತಿ ಮೇಲೆ ಲಾಂಗ್ ನಿಂದ ದಾಳಿ ಮಾಡಿದ್ದಾರೆ.

ದಾಳಿಯಲ್ಲಿ ಚಂದ್ರಮೂರ್ತಿ ಕೈಗೆ ಕಟ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೆರವಿಗೆ ಬಂದ ಕೃಷ್ಣಮೂರ್ತಿ ಎಂಬುವವರ ಮೇಲೆಯೂ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಚಂದ್ರಮೂರ್ತಿಯನ್ನು ಫಾರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಣ ಸಿಗುವುದಿಲ್ಲವೆಂದು ತಿಳಿದ ದುಷ್ಕರ್ಮಿಗಳು ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ಜನನಿಬಿಡವಿರುವ ಮೂಡಲಪಾಳ್ಯದಲ್ಲಿ ಹಾಡುಹಗಲೇ ಈ ಘಟನೆ ನಡೆದಿದ್ದು ನಿವಾಸಿಗಳನ್ನು ಭಯಭೀತರನ್ನಾಗಿ ಮಾಡಿದೆ. ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎತ್ತ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

English summary
In a bid to loot money taken to bank, the miscreants attack security guart of State Bank of Mysore and cut his hand. The incident has taken place in Moodalapalya layout in Nagarabhavi, Bangalore. Retired army man Chandramurthy has been admitted to Fortis hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X