ಬೆಂಗಳೂರು ಕ್ರೈಂ ಬೀಟ್ : ಭದ್ರತಾ ಸಿಬ್ಬಂದಿ ಕೈ ಕಟ್

Miscreants cut security guard hand in Bangalore
ಬೆಂಗಳೂರು, ಆ. 13 : ಬ್ಯಾಂಕ್ ಎಟಿಎಂನಲ್ಲಿ ಹಣ ಇಟ್ಟು ವಾಪಸ್ ಆಗುತ್ತಿದ್ದಾಗ, ಹಣ ದೋಚುವ ಯತ್ನದಲ್ಲಿ ದುಷ್ಕರ್ಮಿಗಳು ಬ್ಯಾಂಕ್ ಭದ್ರತಾ ಸಿಬ್ಬಂದಿಯ ಕೈಯನ್ನು ಕತ್ತರಿಸಿದ ಘಟನೆ ನಾಗರಭಾವಿಯ ಮೂಡಲಪಾಳ್ಯ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ ಜರುಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಎಟಿಎಂನಲ್ಲಿ ಹಣ ಜಮಾ ಮಾಡಿ ವಾಪಸ್ ಆಗುತ್ತಿದ್ದ ಸಮಯದಲ್ಲಿ ಈ ದುರ್ಘಟನೆ ಜರುಗಿದೆ. ವಾಹನದಲ್ಲಿ ಹಣ ಇರಬಹುದೆಂದು ತಿಳಿದ ದುಷ್ಕರ್ಮಿಗಳು ವಾಹನದಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಆಗಿರುವ ನಿವೃತ್ತ ಸೈನಿಕ ಚಂದ್ರಮೂರ್ತಿ ಮೇಲೆ ಲಾಂಗ್ ನಿಂದ ದಾಳಿ ಮಾಡಿದ್ದಾರೆ.

ದಾಳಿಯಲ್ಲಿ ಚಂದ್ರಮೂರ್ತಿ ಕೈಗೆ ಕಟ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೆರವಿಗೆ ಬಂದ ಕೃಷ್ಣಮೂರ್ತಿ ಎಂಬುವವರ ಮೇಲೆಯೂ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಚಂದ್ರಮೂರ್ತಿಯನ್ನು ಫಾರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಣ ಸಿಗುವುದಿಲ್ಲವೆಂದು ತಿಳಿದ ದುಷ್ಕರ್ಮಿಗಳು ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ಜನನಿಬಿಡವಿರುವ ಮೂಡಲಪಾಳ್ಯದಲ್ಲಿ ಹಾಡುಹಗಲೇ ಈ ಘಟನೆ ನಡೆದಿದ್ದು ನಿವಾಸಿಗಳನ್ನು ಭಯಭೀತರನ್ನಾಗಿ ಮಾಡಿದೆ. ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎತ್ತ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+