ಕಾರ್ಮೋಡಗಳ ಮಧ್ಯೆ ಕಾಮನಬಿಲ್ಲು : ಅನಂತ್ ಕುಮಾರ್

ಕಳೆದ ಮೂರು ವರ್ಷಗಳಿಂದ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಜಿಲ್ಲೆಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಬಳ್ಳಾರಿ ಈಗ ಬೆಂಗಳೂರು, ಬರೋಡ, ಭುವನೇಶ್ವರಗಳ ಜೊತೆ ಜೊತೆ ಸ್ಪರ್ಧಿಸುವಷ್ಟು ಸಮರ್ಥವಾಗಿ ಅಭಿವೃದ್ಧಿ ಹೊಂದಿದೆ. ಅಭಿವೃದ್ಧಿ ಹೊಂದುತ್ತಿದೆ. ಬಳ್ಳಾರಿ ಬೆಳೆಯುತ್ತಿದೆ. ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರವೇ ಕಾರಣ ಎಂದು ಅವರು ಹೇಳಿದರು.
'ಬಿಜೆಪಿಯನ್ನು ಒಟ್ಟಾಗಿ ಕಟ್ಟೋಣ. ನಾವು ನಿಮ್ಮೊಂದಿಗೆ ಎಂದೆಂದಿಗೂ ಇದ್ದೇವೆ. ನಿಮಗೆ ಅಧಿಕಾರ ಇರಲಿ, ಇಲ್ಲದಿರಲಿ ನಿಮ್ಮೊಂದಿಗೆ ನಾವಿದ್ದೇವೆ" ಎಂದು ಬಳ್ಳಾರಿಯ ರೆಡ್ಡಿ ಸಹೋದರರನ್ನು ಉದ್ದೇಶಿಸಿ ಹೇಳಿದ ಅನಂತಕುಮಾರ್, ಮುಂದಿನ ಜನಾದೇಶದ ಆಶೀರ್ವಾದ ಕೇಳೋಣ. ಕಾರ್ಮೋಡಗಳ ಮಧ್ಯೆ ಕಾಮನಬಿಲ್ಲು ಕಾಣುವಂತೆ ಪ್ರಸ್ತುತ ಶ್ರೀವರಮಹಾಲಕ್ಷ್ಮೀ ಪೂಜೆ ನಮ್ಮೆಲ್ಲರನ್ನೂ ಒಂದೇ ವೇದಿಕೆಗೆ ಕರೆ ತಂದಿದೆ ಎಂದು ಹೇಳಿದರು.












Click it and Unblock the Notifications