ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಚ್ಡಿಕೆ ಕಾಲದಲ್ಲಿ ಅತ್ಯಧಿಕ ಅದಿರು ಅಕ್ರಮ ರಫ್ತು
2006-07 ಮತ್ತು 2007ರ ಸೆಪ್ಟೆಂಬರ್ ವರೆಗಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಆಂಧ್ರಪ್ರದೇಶದ ಕಾಕಿನಾಡ, ವಿಶಾಖಪಟ್ಟಣ, ಗೋವಾ, ಚೆನ್ನೈ ಬಂದರುಗಳಿಂದ ಅಕ್ರಮವಾಗಿ ಅತಿ ಹೆಚ್ಚು ಕಬ್ಬಿಣದ ಅದಿರು ರಫ್ತಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಬಿಎಸ್ಕೆ ಟ್ರೇಡಿಂಗ್ ಕಂಪೆನಿ ಅದಿರು ರಫ್ತಿನಲ್ಲಿ ಪ್ರಮುಖ ಪಾತ್ರವಹಿಸಿದ್ದರೂ, ಇದು ಯಾವ ರೀತಿ ಲಾಭ ಮಾಡಿಕೊಂಡಿದೆ ಎಂಬುದರ ವಿವರ ಲೋಕಾಯುಕ್ತ ವರದಿಯಲ್ಲಿ ಇಲ್ಲ. ಒಟ್ಟಾರೆಯಾಗಿ ಎಚ್ಡಿ ಕುಮಾರಸ್ವಾಮಿ ಅವಧಿಯಲ್ಲೇ ಅತಿ ಹೆಚ್ಚು ಅಕ್ರಮ ಗಣಿಗಾರಿಕೆ ನಡೆದಿರುವುದು ಲೋಕಾಯುಕ್ತರು ನೀಡಿರುವ ಅಂಕಿ ಅಂಶದಿಂದ ಖಚಿತಗೊಂಡಿದೆ.
ಆದರೆ ಎರಡು ಕಂಪನಿಗಳಿಗೆ ಪರವಾನಗಿ ಕೊಡಿಸಿ ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟವುಂಟು ಮಾಡಿರುವ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ. ಅದೇ ವಿಷಯವನ್ನು ಲೋಕಾಯುಕ್ತರು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.
Comments
English summary
Who moved my Cheese? : As per the Lokayukta Justice Santosh Hegde report on Illegal Mining in Karnataka during Chief Minister HD Kumaraswamy administration 65 lakh metric tons of oron ore was exported illegally.
Story first published: Monday, August 8, 2011, 14:54 [IST]