ಶೋಭಾ ಸಿಎಂ; ನಾನು ರಾಜ್ಯಾಧ್ಯಕ್ಷ: ಯುಡ್ಡಿ ಹೊಸ ಬಾಂಬ್
ಬೆಂಗಳೂರು,
ಜುಲೈ 29: ಕೊನೆಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಕಡೆಯ ದಾಳ ಉರುಳಿಸಿದ್ದಾರೆ. ತಾನು ರಾಜೀನಾಮೆ ನೀಡುವುದಿಲ್ಲ. ನೀಡದರೂ ಷರತ್ತುಬದ್ಧ ರಾಜೀನಾಮೆ ನೀಡುವೆ. ಇಲ್ಲವಾದಲ್ಲಿ ನನ್ನ ದಾರಿ ನನ್ನದು; ನಿಮ್ಮ ದಾರಿನಿಮ್ಮದು ಎಂದು ಧರ್ಮೇಂದ್ರ ಪ್ರಧಾನ್ ಮೂಲಕ ಬಿಜೆಪಿ ಹೈಕಮಾಂಡ್ ಗೆ ಸ್ಪಷ್ಟ ಸಂದೇಶ ಕಳಿಸಿದ್ದಾರೆ. id="toptextpromo">ಬಿಜೆಪಿ
ಉಸ್ತುವಾರಿ ಹೊತ್ತಿರುವ ಪ್ರಧಾನ್ ಜತೆ ದೂರವಾಣಿಯಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, 'ಮೇಲಿನ ಷರತ್ತಿಗೆ ಒಪ್ಪುವುದಾದರೆ ಮಾತ್ರ ಮುಂದಿನ ಮಾತುಕತೆಗೆ ಒಪ್ಪುವೆ. ನಾನೇ ಪಕ್ಷದ ರಾಜ್ಯಾಧ್ಯಕ್ಷ ಆಗಬೇಕು. ಇಲ್ಲವಾದಲ್ಲಿ ಇಂದು ಮಧ್ಯಾಹ್ನ 4 ಗಂಟೆಗೆ ನಡೆಯಲಿರುವ ಶಾಸಕಾಂಗ ಸಭೆ ನಡೆಯುವುದಿಲ್ಲ' ಎಂದು ಎಚ್ಚರಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಬೆಳವಣಿಗೆಗಳಿಗೆ ಪೂರಕವಾಗಿ ಬಿಜೆಪಿಯ ಬಹುತೇಕ ಶಾಸಕರು ಮತ್ತು ಸಂಸದರು ಯಡಿಯೂರಪ್ಪ ಅವರೇ ನಮ್ಮ ಏಕೈಕ ನಾಯಕ ಎಂದು ಘೋಷಿಸಿದ್ದಾರೆ. ಜತೆಗೆ ಲೋಕಾಯುಕ್ತ ಹೆಗ್ಡೆ 'ಗಣಿಗಾರಿಕೆ' ವರದಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ತಾನೆ ಬಂದ ಸುದ್ದಿಯಂತೆ ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಅವರು ಬೆಂಗಳೂರಿಗೆ ಬಂದಿಳಿದಿದ್ದು ಅವರನ್ನು ಯಡಿಯೂರಪ್ಪ ಅವರ ಹೊಸ ಷರತ್ತುಗಳು ಸ್ವಾಗತ ಕೋರಿವೆ ಎನ್ನಬಹುದು.











Click it and Unblock the Notifications