ಯಡ್ಡಿಗೆ ಒಂದು ನ್ಯಾಯ? ಗಡ್ಕರಿಗೆ ಇನ್ನೊಂದು ಏಕೆ?

Nitin Gadkari
ಬೆಂಗಳೂರು ಜು 28 : ಪತನದ ಹಾದಿಯಲ್ಲಿರುವ ಯಡಿಯೂರಪ್ಪ ಅವರಿಗೆ ಈ ಬಾರಿ ಮಠಾಧೀಶರಾಗಲಿ ಪರಮಾಪ್ತ ಅಧ್ಯಕ್ಷ ನಿತಿನ್ ಗಡ್ಕರಿಯಾಗಲಿ ಕೈ ಹಿಡಿಯಲಿಲ್ಲ. ಕೊನೆಗೂ ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಾರೆ. ಆದರೆ, ಯಡಿಯೂರಪ್ಪ ಅವರಿಂದ ಭರ್ಜರಿಯಾಗಿ ಲಾಭ ಪಡೆದ ಗಡ್ಕರಿ ಅವರನ್ನು ಮಾತ್ರ ಯಾರೂ ಪ್ರಶ್ನಿಸುತ್ತಿಲ್ಲ ಏಕೆ ಎಂಬ ಸಣ್ಣ ಕೂಗು ಎದ್ದಿದೆ.

ಬೆಂಗಳೂರಿನ ಸುಮನಹಳ್ಳಿ ಭಿಕ್ಷುಕರ ಕಾಲೋನಿಯಲ್ಲಿ ಸುಮಾರು 1,000 ಕೋಟಿ ರೂಪಾಯಿ ವೆಚ್ಚ ವಾಣಿಜ್ಯ ಸಂಕೀರ್ಣ, ಪಂಚತಾರಾ ಹೋಟೆಲ್ ಹಾಗೂ ಇತರ ಕಟ್ಟಡ ಕಾಮಗಾರಿಗಳು ನಡೆಯುತ್ತಿವೆ.

ಮುಂಬೈ ಮೂಲದ ಟಂಡನ್ ಅರ್ಬನ್ ಸಲ್ಯೂಷನ್ಸ್ ಗೆ ಕಾಮಗಾರಿ ಉಸ್ತುವಾರಿ ನೀಡಲಾಗಿದೆ. ಈ ಸಂಸ್ಥೆಗೂ ಗಡ್ಕರಿಗೂ ಆತ್ಮೀಯ ನಂಟಿದೆ ಬಲ್ಲ ಮೂಲಗಳು ಹೇಳಿವೆ.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಲೆಕ್ಕಪತ್ರವಿಭಾಗದ ಜವಾಬ್ದಾರಿ ಹೊಂದಿರುವ ಬಿಜೆಪಿ ಮುಖಂಡರೊಬ್ಬರಿಗೆ ಸೇರಿರುವ ಟಂಡನ್ ಸಲ್ಯೂಷನ್ಸ್ ನ ಕಾಮಗಾರಿ ಬಗ್ಗೆ ಗಡ್ಕರಿ ಆಸಕ್ತಿವಹಿಸಿ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು.

123.30 ಎಕರೆ ಪ್ರದೇಶದಲ್ಲಿ 10 ಎಕರೆ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಉಳಿದ ಭೂ ಪ್ರದೇಶದಲ್ಲಿ ಪಂಚತಾರಾ ಹೋಟೆಲ್, ವಾಣಿಜ್ಯ ಸಂಕೀರ್ಣ, ಕ್ಲಬ್ ಮುಂತಾದವುಗಳನ್ನು ನಿರ್ಮಿಸಲು ಬಿಡಿಎ ಗ್ರೀನ್ ಸಿಗ್ನಲ್ ನೀಡಿದೆ.

ಯಡಿಯೂರಪ್ಪ-ಗಡ್ಕರಿ ಮಧ್ಯಸ್ಥಿಕೆಯಲ್ಲಿ ರಾಜ್ಯದಲ್ಲಿ ಟಂಡನ್ ಕಂಪೆನಿಗೆಮಾರುಕಟ್ಟೆ ಅಭಿವೃದ್ಧಿ , ಕೆರೆ ಅಭಿವೃದ್ಧಿ, ಕಡು ಬಡವರಿಗೆ ವಸತಿ ಯೋಜನೆ, ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ , ಹಸಿರು ತೋರಣ ಯೋಜನೆ ಮೊದಲಾದ ಕೋಟ್ಯಂತರ ರೂಪಾಯಿ ಯೋಜನೆಗಳನ್ನು ನೀಡಲಾಗಿದೆ. ಇಬ್ಬರು ನಾಯಕರು ಕೋಟ್ಯಂತರ ರೂಪಾಯಿ ಕಮಿಷನ್ ಪಡೆದಿರುವ ಶಂಕೆಯೂ ಇದೆ. ಆದರೆ, ಯಾವುದೂ ಸ್ಪಷ್ಟವಾಗಿ ಸಾಬೀತಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+