ಬಳ್ಳಾರಿ ರೆಡ್ಡಿ ಸೋದರರು ಎಲ್ಲಿ, ಅವರ ನಡೆಯೇನು?

ತ್ರಿಮೂರ್ತಿಗಳು ತಕ್ಷಣಕ್ಕೆ ಬಿ. ಎಸ್. ಯಡಿಯೂರಪ್ಪ ರಾಜೀನಾಮೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹೈಕಮಾಂಡ್ ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೂ ನಾವು ಬದ್ಧರಿರುತ್ತೇವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪಗೆ ಮನದಟ್ಟುಪಡಿಸಿದ್ದಾರೆ.
ಮೂವರೂ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದು, ಹಾಲಿ ವಿದ್ಯಾಮಾನಗಳತ್ತ ಗಮನ ಹರಿಸಿದ್ದೇವೆ. ಸದ್ಯಕ್ಕೆ ಲೋಕಾಯುಕ್ತ 'ಗಣಿಗಾರಿಕೆ' ವರದಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ವರದಿಯ ಪ್ರತಿ ಕೈಸೇರಿದ ಮೇಲೆ ಅಧ್ಯಯನ ಮಾಡಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಶ್ರೀರಾಮುಲು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದೇ ವೇಳೆ, ಕಾನೂನು ಮುಂದೆ ಎಲ್ಲರೂ ಸಮಾನರು. ಯಡಿಯೂರಪ್ಪ ಅವರೇ ಹೋದ ಮೇಲೆ ಬೇರೆಯವರ ಲೆಕ್ಕ ಯಾವುದು? ಎಂದು ಲೋಕಾಯುಕ್ತ ವರದಿಯಲ್ಲಿ ರಾರಾಜಿಸುತ್ತಿರುವ ರೆಡ್ಡಿ ಸೋದರರ ಭವಿಷ್ಯದ ಬಗ್ಗೆ ಸಂಕೇತ ನೀಡಿದ್ದಾರೆ.












Click it and Unblock the Notifications