Get Updates
Get notified of breaking news, exclusive insights, and must-see stories!

ತಣ್ಣಗಾದ ಡಿಎಂಕೆ ಕಾರ್ಯಕಾರಿಣಿ: ಕರುಣಾನಿಧಿಯೇ ಅಧಿಪತಿ

DMK General Council meeting
ಕೊಯಮತ್ತೂರು, ಜುಲೈ25: ಕರುಣಾನಿಧಿಯೇ ಪಕ್ಷದ ನೇತೃತ್ವ ವಹಿಸಿಕೊಳ್ಳಬೇಕು ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮುಂದುವರಿಸಬೇಕು ಎಂದು ಡಿಎಂಕೆ ಮಹಾಮಂಡಳಿ ಸಭೆಯಲ್ಲಿ ಭಾನುವಾರ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಕೇಂದ್ರ ಸಚಿವ ಸಂಪುಟದಲ್ಲಿ ಖಾಲಿ ಇರುವ ಡಿಎಂಕೆಗೆ ಮೀಸಲಾದ ಎರಡು ಸ್ಥಾನಗಳನ್ನು ತುಂಬುವ ಬಗ್ಗೆ ಮೌನ ವಹಿಸಲಾಗಿದೆ.

2ಜಿ ತರಂಗಾಂತರ ಹಂಚಿಕೆ ಹಗರಣದ ಆರೋಪ ಹೊತ್ತಿರುವ ಎ.ರಾಜಾ ಮತ್ತು ದಯಾನಿಧಿ ಮಾರನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿ ಉಳಿದಿವೆ.

ಇತ್ತೀಚೆಗೆ ನಡೆದ ಕೇಂದ್ರ ಸಂಪುಟ ಪುನರ್ ರಚನೆಯ ಸಂದರ್ಭದಲ್ಲೂ ಈ ಸ್ಥಾನಗಳಿಗೆ ತಮ್ಮ ಸಂಸದರ ಹೆಸರನ್ನು ಡಿಎಂಕೆ ಸೂಚಿಸಲಿಲ್ಲ. ಪಕ್ಷದ ಮಹಾಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಪ್ರಧಾನಿಗೆ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಕರುಣಾನಿಧಿ ಹೇಳಿದ್ದರು. ಆದರೆ ಶನಿವಾರ ಆರಂಭವಾದ ಎರಡು ದಿನಗಳ ಸಭೆಯಲ್ಲಿ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಮಹಾಮಂಡಳಿ ಸಭೆ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವ ವಹಿಸಿಕೊಳ್ಳುವ ಕುರಿತು ಕರುಣಾನಿಧಿ ಅವರ ಪುತ್ರರೂ ಆದ ಪಕ್ಷದ ಖಜಾಂಚಿ ಎಂ.ಕೆ. ಸ್ಟಾಲಿನ್ ಮತ್ತು ಕೇಂದ್ರದಲ್ಲಿ ಸಂಪುಟ ದರ್ಜೆ ಸಚಿವರಾಗಿರುವ ಎಂ.ಕೆ. ಅಳಗಿರಿ ನಡುವೆಯೇ ತೀವ್ರ ಪೈಪೋಟಿ ನಡೆದಿತ್ತು.

ತಮ್ಮ ಪುತ್ರರ ಬೆಂಬಲಿಗರಲ್ಲಿ ಉಂಟಾದ ವೈಮನಸ್ಯದಿಂದ ವ್ಯಾಕುಲಗೊಂಡ ಕರುಣಾನಿಧಿ, ಮಹಾಮಂಡಳಿಯು ತಾವು ಪಕ್ಷದ ಅಧ್ಯಕ್ಷ ಸ್ಥಾನ ತೊರೆಯಬೇಕೆಂದು ಬಯಸುತ್ತದೆಯೇ? ಎಂದು ಕೇಳಿದರು. ಬಳಿಕ ಸಭೆಯು ಕರುಣಾನಿಧಿ ಅವರ ನಾಯತ್ವದಲ್ಲಿ ಮುನ್ನಡೆಯುವ ನಿರ್ಧಾರ ತೆಗೆದುಕೊಂಡಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+