ಶೋಭಾ ಕರಂದ್ಲಾಜೆ ಪಟ್ಟಾಭಿಷೇಕಕ್ಕೆ ಯಡಿಯೂರಪ್ಪ ರೆಡಿ

ಯಡಿಯೂರಪ್ಪ ತಮ್ಮ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇ ಆದರೆ ಇಂಧನ ಸಚಿವೆ ಶೋಭಾ ಅವರು ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ.
ಈ ನಿಟ್ಟಿನಲ್ಲಿ ಯಡಿಯೂರಪ್ಪ ಅವರ 'ಶೋಭಾ ಪಟ್ಟಾಭಿಷೇಕ' ನಡೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಧಿಕಾರವನ್ನು ತಮ್ಮ ನೆಚ್ಚಿನ ಶಿಷ್ಯೆಗೆ ಹಸ್ತಾಂತರಿಸುವ ಮೂಲಕ ಸರಕಾರ ಮತ್ತು ಪಕ್ಷದ ಮೇಲಿನ ಹಿಡಿತವನ್ನು ತಮ್ಮ ಮುಷ್ಟಿಯಲ್ಲೇ ಇಟ್ಟುಕೊಳ್ಳುವುದು ಯಡಿಯೂರಪ್ಪ ಅವರ ಇರಾದೆಯಾಗಿದೆ ಎಂದು ನಮ್ಮ ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
ಈ ಮಧ್ಯೆ, ಪಕ್ಷದ ಆಂತರಿಕ ವಲಯದಲ್ಲಿ ಯಡಿಯೂರಪ್ಪ ಅವರ ಈ ನಡಾವಳಿ ಈಗಾಗಲೇ ಅನೇಕ ನಾಯಕರಿಗೆ ಇರುಸುಮುರುಸು ತಂದಿದೆ. ಅರ್ಹ ನಾಯಕರು ಪಕ್ಷದಲ್ಲಿ ಇಲ್ಲವೇ? ಎಂದು ಯಡಿಯೂರಪ್ಪ ವಿರೋಧಿಗಳು ಕೆಂಡಕಾರತೊಡಗಿದ್ದಾರೆ. ಆದರೆ ಯಡಿಯೂರಪ್ಪ ಶೋಭಾಗಾಗಿಯೇ ಬಿಗಿಪಟ್ಟು ಹಿಡಿದಿದ್ದಾರೆ. ಇದೇ ವೇಳೆ ಯಡಿಯೂರಪ್ಪ ಕಪಿಮುಷ್ಠಿ ದೆಹಲಿ ಹೈಕಮಾಂಡ್ ವರೆಗೂ ಬಲಿಷ್ಠವಾಗಿ ತಲುಪಬಲ್ಲದು ಎಂಬುವುದನ್ನು ತಿಳಿದ ಮಂದಿ ಸುಮ್ಮನಾಗಿದ್ದಾರೆ.
ಯಾರೀಕೆ ಶೋಭಾ ಕರಂದ್ಲಾಜೆ?: ಈ ಸಂದರ್ಭದಲ್ಲಿ ಯಾರೀಕೆ ಶೋಭಾ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತಿದೆ. ಶೋಭಾ ಹಿನ್ನೆಲೆಯನ್ನು ಕೆದಕಿದಾಗ...ಶೋಭಾ ಜನನ 23 ಅಕ್ಟೋಬರ್ 1966. ದಕ್ಷಿಣ ಕನ್ನಡದ ಪ್ರತಿಭೆ. ಪಕ್ಷಕ್ಕೆ ಸೇರ್ಪಡೆಯಾಗಿದ್ದು 1994ರಲ್ಲಿ. 1999ಲ್ಲಿ ಬಿ. ಎಸ್. ಯಡಿಯೂರಪ್ಪ ಸಂಗದಲ್ಲಿ ಪಕ್ಷದಲ್ಲಿ ಹೆಚ್ಚು ಕ್ರಿಯಾಶೀಲ. 2000ರಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ.
ಮೇಲ್ಮನೆಗೆ 2004ರಲ್ಲಿ ನಾಮಕರಣ. ಬೆಂಗಳೂರು ಯಶವಂತಪುರ ವಿಧಾನಸಭೆ ಕ್ಷೇತ್ರದ ಶಾಸಕಿ. 2008ರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವೆಯಾಗಿ ಅಧಿಕಾರಕ್ಕೆ. 2009ರ ಅಕ್ಟೋಬರಿನಲ್ಲಿ ಪ್ರತಿಕೂಲ ರಾಜಕೀಯ ವಿದ್ಯಮಾನಗಳಿಂದಾಗಿ ಸಚಿವೆ ಸ್ಥಾನಕ್ಕೆ ಚ್ಯುತಿ, ಕೃಪೆ: ಬಳ್ಳಾರಿ ರೆಡ್ಡಿ ಸೋದರರು. ಶೋಭಾ ಸಚಿವ ಸ್ಥಾನಕ್ಕೆ ಕುತ್ತು ಬಂದಾಗ ದೆಹಲಿಯಲ್ಲಿ ಟಿವಿ9 ಕ್ಯಾಮರಾ ಮುಂದೆ ಗಳಗಳನೆ ಅತ್ತ ಯಡಿಯೂರಪ್ಪ. 2010ರಲ್ಲಿ ಮತ್ತೆ ಸಂಪುಟ ಸೇರಿಕೊಂಡ ಶೋಭಾ ಅವರ ವೆಬ್ಸೈಟ್ ವಿಳಾಸ- http://shobhakarandlaje.com/
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications