ಸಚಿವ ರೇಣುಕಾಚಾರ್ಯ ಕಂಡ ಹಸಿ ಹಸಿ ಕನಸು

ಇಷ್ಟಕ್ಕೂ ರೇಣುಕಾಜಿ ಕಂಡ ಕನಸು, ಕಾಣುತ್ತಿರುವ ಕನಸು ಆಗಷ್ಟ್ 15ರೊಳಗೆ ರಾಜ್ಯವನ್ನು ಕಳ್ಳಭಟ್ಟಿ ಮುಕ್ತವನ್ನಾಗಿಸುವುದು. ಚಾಮರಾಜನಗರ ಜಿಲ್ಲೆ ಅಭಿವೃದ್ಧಿ ಪಡಿಸಿ ರಾಜ್ಯದಲ್ಲೇ ನಂ.1 ಮಾಡುವುದು ಇದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಪಿ ರೇಣುಕಾಚಾರ್ಯ ಅವರ ಆಸೆ.
ಅಬಕಾರಿ ಮಾಫಿಯಾ ವಿರುದ್ಧ ಹೋರಾಡಲು ಇಲಾಖೆಗೆ ಬೇಕಾಗಿರುವ ಅಗತ್ಯ ಶಸ್ತ್ರಗಳನ್ನು ಖರೀದಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಜು.19ರ ನಂತರ ಗೋವಾ, ಮಹಾರಾಷ್ಟ ಹಾಗೂ ಆಂಧ್ರಪ್ರದೇಶದ ಅಬಕಾರಿ ಸಚಿವರನ್ನು ಭೇಟೀ ಮಾಡಿ ಅಕ್ರಮ ಮದ್ಯ ಪೂರೈಕೆಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸುಮಾರು 830 ಅಕ್ರಮ ಮದ್ಯ ತಯಾರಿಕಾ ಘಟಕಗಳನ್ನು ಧ್ವಂಸಗೊಳಿಸಲಾಗಿದೆ. ಅಬಕಾರಿ ಇಲಾಖೆ ನವೀಕರಣಕ್ಕೆ 100 ಕೋಟಿ ರೂ ಹೆಚ್ಚಿನ ಅನುದಾನ ಸಿಕ್ಕಿದೆ. ತಮಕೂರಿನ ಸಿರಾ ತಾಲೂಕಿನ 70 ಎಕರೆ ಭೂ ಪ್ರದೇಶದಲ್ಲಿ ಅಬಕಾರಿ ಅಕಾಡೆಮಿ ಸ್ಥಾಪಿಸಲಾಗುವುದು ಎಂದು ಸಚಿವ ರೇಣುಕಾ ಹೇಳಿದರು.












Click it and Unblock the Notifications