ಜಗನ್ನಾಥ ಯಾತ್ರೆ : ಪೊಲೀಸ್, ಅರ್ಚಕರ ಹೊಡೆದಾಟ

ಜಗನ್ನಾಥನ ದರ್ಶನ ಪಡೆಯಲು ಮತ್ತು ಜಾತ್ರೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ರಥದ ಮೇಲಿರುವ ಭಗವಂತನನ್ನು ಹತ್ತಿರದಿಂದ ನೋಡಲು ಭಕ್ತರು ಅಲ್ಯುಮಿನಿಯಂ ಏಣಿ ಏರಲು ನಾಮುಂದು ತಾಮುಂದು ಎನ್ನುತ್ತಿದ್ದರು. ರಥ ಅಲುಗಾಡಲು ಆರಂಭಿಸಿದ್ದರಿಂದ ಪೊಲೀಸರು ತಡೆಯೊಡ್ಡಿದರು.
ಇದನ್ನು ಅರ್ಚಕರು ವಿರೋಧಿಸಿದ್ದರಿಂದ ಇಬ್ಬರ ನಡುವೆ ನಡೆದ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಭಿನ್ನಾಭಿಪ್ರಾಯ ಇತ್ಯರ್ಥವಾಗುವವರೆಗೆ ಈ ಆಚರಣೆಯನ್ನು ನಿಲ್ಲಿಸಲಾಗಿತ್ತು. ಜಿಲ್ಲಾಡಳಿತ ಮತ್ತು ದೇವಸ್ಥಾನದ ಹಿರಿಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಭಗವಾನ್ ಜಗನ್ನಾಥನ ವಾರ್ಷಿಕ ರಥಯಾತ್ರೆ ಭಾನುವಾರದಿಂದ ಆರಂಭವಾಗಿದೆ.












Click it and Unblock the Notifications