ತಿರುಪತಿ ತಿಮ್ಮಪ್ಪನನ್ನು ಹಿಮ್ಮೆಟ್ಟಿದ ಅನಂತ ಪದ್ಮನಾಭ ಸ್ವಾಮಿ

ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಸರ್ಪಗಾವಲು ಹಾಕಲಾಗಿದೆ. ಗನ್ ಧಾರಿ ಭದ್ರತಾ ಸಿಬ್ಬಂದಿಗಳು ಮತ್ತು ಕ್ಯಾಮರಾಗಳಿಂದ ಬಿಗಿಭದ್ರತೆ ಒದಗಿಸಲಾಗಿದೆ. ಸುಪ್ರಿಂ ಕೋರ್ಟ್ ನೇಮಿಸಿದ 7 ಜನರ ತಂಡವು ಇನ್ನಷ್ಟು ನಿಧಿಯ ಅನ್ವೇಷಣೆಯಲ್ಲಿ ತೊಡಗಿದೆ.
ಅತಿ ಪುರಾತನ ದೇವಸ್ಥಾನಗಳಲ್ಲಿ ಒಂದೆನಿಸಿರುವ ಕೇರಳದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಸಾವಿರಾರು ಕೋಟಿ ರು. ಮೌಲ್ಯದ ನಿಧಿ ಪತ್ತೆಯಾಗಿರುವುದು ಕೋಟಿ ಕೋಟಿ ಭಕ್ತಾದಿಗಳನ್ನು ಚಕಿತಗೊಳಿಸಿದೆ. ಪುರಾತತ್ವ ಪಂಡಿತರಿಗೆ ಶೋಧಿಸಲು ಹೊಸ ವಿಷಯ ಸಿಕ್ಕಂತಾಗಿದೆ.
ಅಚ್ಚರಿಯ ವಿಷಯವೆಂದರೆ ಇಲ್ಲಿ ಆರು ಬೃಹತ್ ಕೋಣೆಗಳಲ್ಲಿ ನಿಧಿ ಪತ್ತೆಯಾಗಿದೆ. ಇದರಲ್ಲಿ ಎರಡು ಕೋಣೆಯನ್ನು ಕಳೆದ 150 ವರ್ಷಗಳಿಂದ ತೆರೆದಿರಲಿಲ್ಲ. ಕೃತಕ ಉಸಿರಾಟ ಸಾಧನಗಳ ನೆರವಿನಿಂದ ಭದ್ರವಾದ ಕೋಣೆಯಲ್ಲಿ ನಿನ್ನೆ ನಿಧಿ ಶೋಧನೆ ಆರಂಭಿಸಲಾಗಿತ್ತು.
ಇಲ್ಲಿ ಸಾವಿರಾರು ವರ್ಷ ಹಳೆಯದಾದ ಬಂಗಾರದ ಪಟ್ಟಿ, ಸರ, ನಾಣ್ಯಗಳು, ಹರಳು, ವಜ್ರ, ಕಿರೀಟಗಳು ಪತ್ತೆಯಾಗಿತ್ತು. ಒಟ್ಟಾರೆ 50 ಸಾವಿರ ಕೋಟಿ ರು. ಮೌಲ್ಯಕ್ಕಿಂತ ಹೆಚ್ಚು ಬೆಳೆಬಾಳುವ ನಿಧಿ ಪತ್ತೆಯಾಗಿದೆ ಎನ್ನಲಾಗಿದೆ. ಈಗ ಪತ್ತೆಯಾಗಿರುವುದು ಶೇ 30ರಷ್ಟು ಎಂದು ಹಲವು ವರದಿಗಳು ಹೇಳಿವೆ. ಮಾಧ್ಯಮಗಳಲ್ಲಿ ವರದಿಯಾದಕ್ಕಿಂತ ಹಲವು ಪಟ್ಟು ಹೆಚ್ಚು ಸಂಪತ್ತು ಇರುವ ಸಾಧ್ಯತೆಯಿದೆ ಎಂದು ಶೋಧ ತಂಡದ ಸುಂದರರಾಜನ್ ಹೇಳಿದ್ದಾರೆ.
ಒಳಗಡೆ ಆಮ್ಲಜನಕದ ಕೊರತೆ ಇದ್ದರಿಂದ ಆ ಎರಡು ಕೋಣೆಗಳ ಬಾಗಿಲು ತೆರೆಯಲಾಗಿಲ್ಲ ಎಂದು ಸುಂದರರಾಜನ್ ಹೇಳಿದ್ದಾರೆ. ತಿರುವನಂತಪುರದ ರಾಜಮನೆತನವೊಂದು ಈ ದೇಗುಲವನ್ನು ಪುರಾತನ ಕಾಲದಲ್ಲಿ ನೋಡಿಕೊಳ್ಳುತ್ತಿತ್ತು. ನಿವೃತ್ತ ನ್ಯಾಯಾಧೀಶ ಎಂಎನ್ ಕೃಷ್ಣನ್ ನೇತೃತ್ವದಲ್ಲಿ 7 ಜನರ ತಂಡವು ನಿಧಿ ಶೋಧನೆ ನಡೆಸುತ್ತಿದೆ. ನಿಧಿ ಶೋಧನೆ ಪ್ರಕ್ರಿಯೆ ಇನ್ನೂ ಕೆಲವು ದಿನ ಮುಂದುವರೆಯುವ ನಿರೀಕ್ಷೆಯಿದೆ.












Click it and Unblock the Notifications