Get Updates
Get notified of breaking news, exclusive insights, and must-see stories!

ದಟ್ಸ್ ಕನ್ನಡ ಫಲಶ್ರುತಿ : ನಾಯಂಡಹಳ್ಳಿ ರಸ್ತೆ ಸಂಚಾರಿಗಳು ಸುರಕ್ಷಿತ

Nayandahalli junction on Mysore road
ಬೆಂಗಳೂರು, ಜು. 1 : ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ನಲ್ಲಿ ನಮ್ಮ ಮೆಟ್ರೋ ಯೋಜನೆಗಾಗಿ ನಿರ್ಮಿಸಲಾಗಿದ್ದ ಪಿಲ್ಲರ್ ಬಳಿ ಅಪಾಯಕಾರಿಯಾಗಿ ತೆರೆದುಕೊಂಡಿದ್ದ ಗುಂಡಿ ಈಗ ತಡೆಗೋಡೆ ನಿಲ್ಲಿಸಲಾಗಿದೆ. ಅಷ್ಟರ ಮಟ್ಟಿಗೆ ರಸ್ತೆ ಸಂಚಾರಿಗಳು ಸುರಕ್ಷಿತ.

ಇದು ದಟ್ಸ್ ಕನ್ನಡ ಫಲಶ್ರುತಿ. ಈ ರೀತಿಯಲ್ಲಿ ರಸ್ತೆ ಸಂಚಾರಿಗಳಿಗೆ ಅಪಾಯ ಕಾದಿದೆಯೆಂದು ಫೋಟೋ ತೆಗೆದು, ಲೇಖನ ಬರೆದು ಪ್ರಕಟಿಸಲಾಗಿತ್ತು. ಅದನ್ನು ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರಿಗೂ ತಲುಪಿಸಲಾಗಿತ್ತು. ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಈ ರಸ್ತೆಯಲ್ಲಿ ಇನ್ನು ಅಲ್ಪಮಟ್ಟಿಗಾದರೂ ನಿರಾಳವಾಗಿ ಸಂಚರಿಸಬಹುದು.

ಇಂತಹ ಯಾವುದೇ ರೀತಿಯ ತೊಂದರೆ ಕಂಡುಬಂದಲ್ಲಿ ಪೊಲೀಸರಿಗೆ ತಿಳಿಸುವ ಜವಾಬ್ದಾರಿ ನಾಗರಿಕರದ್ದು ಎಂದು ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಕೆಲ ದಿನಗಳ ಹಿಂದೆ ದಟ್ಸ್ ಕನ್ನಡಕ್ಕೆ ನೀಡಲಾಗಿದ್ದ ಸಂದರ್ಶನದಲ್ಲಿ ಹೇಳಿದ್ದರು. ಈ ಕರೆಗೆ ಸ್ಪಂದಿಸುವ ಜವಾಬ್ದಾರಿ ಇನ್ನು ನಾಗರಿಕರದ್ದು. ಬೆಂಗಳೂರು ಪೊಲೀಸರ ಈಮೇಲ್ : [email protected]

ಪೊಲೀಸ್ ಅಧಿಕಾರಿಗಳೊಂದಿಗೆ ನಾವು ಕೂಡ ಕೈಜೋಡಿಸಿದರೆ ನಮ್ಮ ಬೆಂಗಳೂರನ್ನು ಇನ್ನಷ್ಟು ಸುಂದರವಾಗಿಸಬಹುದು. ಇಂತಹ ತೊಂದರೆಗಳು ಕಂಡುಬಂದಲ್ಲಿ ದಟ್ಸ್ ಕನ್ನಡಕ್ಕೇ ನೇರವಾಗಿ ಬರೆಯಿರಿ. ಆ ಲೇಖನವನ್ನು ಪ್ರಕಟಿಸಿ, ಆಯುಕ್ತರಿಗೆ ತಲುಪಿಸುವ ಜವಾಬ್ದಾರಿ ದಟ್ಸ್ ಕನ್ನಡದ್ದು. ಬೆಂಗಳೂರು ಪೊಲೀಸರಿಗೊಂದು ಥ್ಯಾಂಕ್ಸ್.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+