ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಟಿಜಿಟಿ ಮಳೆಯಲ್ಲಿ ಯಡಿಯೂರಪ್ಪರಿಂದ ದೇವರ ದರ್ಶನ, ಆಣೆ ಇಲ್ಲ

By Srinath
|
Google Oneindia Kannada News

BSY
ಧರ್ಮಸ್ಥಳ, ಜೂನ್ 27: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಶಾಸಕರ ಪಡೆಯೊಂದಿಗೆ ಶ್ರೀ ಮಂಜುನಾಥನ ಸ್ವಾಮಿಯ ದರ್ಶನಕ್ಕೆ ಸೋಮವಾರ ಬೆಳಗ್ಗೆ ದೇವಸ್ಥಾನದ ಮುಂದೆ ಬಸ್ಸಿನಲ್ಲಿ ಬಂದು ಇಳಿದರು. ಜಿಟಿಜಿಟಿ ಮಳೆಯಲ್ಲೇ ಜಿಲ್ಲಾಡಳಿತ ಮುಖ್ಯಮಂತ್ರಿಗೆ ಗೌರವ ಅರ್ಪಿಸಿತು.

ರಾಮಚಂದ್ರೇಗೌಡ, ರೇಣುಕಾಚಾರ್ಯ ಸೇರಿದಂತೆ ಬಹುತೇಕ ಸಚಿವರ ದಂಡಿನೊಂದಿಗೆ ದೇವಸ್ಥಾನದಲ್ಲಿ 9.09ಕ್ಕೆ ಸರಿಯಾಗಿ ಒಳ ಪ್ರವೇಶಿಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ದೇವಸ್ಥಾನದಲ್ಲಿ ತಂಗಲಿದ್ದು, ಬಳಿಕ ಸುದ್ದಿಗೋಷ್ಠಿ ನಡೆಸಿ, ಕುಕ್ಕೆ ಸುಬ್ರಮಣ್ಯದತ್ತ ಪ್ರಯಾಣ ಮಾಡಲಿದ್ದಾರೆ.

ಈ ಮಧ್ಯೆ, ಬೆಳಗ್ಗೆಯಿಂದಲೇ ಸಾರ್ವಜನಿಕರಿಗೆ ದೇಗುಲ ಪ್ರವೇಶವನ್ನು ತಡೆಹಿಡಿಲಾಗಿದೆ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರು ಶ್ರೀಕ್ಷೇತ್ರದಿಂದ ಹೊರನಡೆದ ಬಳಿಕವಷ್ಟೇ ಭಕ್ತರಿಗೆ ಮಂಜುನಾಥ ಸ್ವಾಮಿ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು ಎಂದು ದೇವಸ್ಥಾನದ ಮೂಲಗಳು ಹೇಳಿವೆ.

English summary
BS Yeddyurappa dharmasthala darshan has started. District administration has welcomed him officially.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X