ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜಿಟಿಜಿಟಿ ಮಳೆಯಲ್ಲಿ ಯಡಿಯೂರಪ್ಪರಿಂದ ದೇವರ ದರ್ಶನ, ಆಣೆ ಇಲ್ಲ
ರಾಮಚಂದ್ರೇಗೌಡ, ರೇಣುಕಾಚಾರ್ಯ ಸೇರಿದಂತೆ ಬಹುತೇಕ ಸಚಿವರ ದಂಡಿನೊಂದಿಗೆ ದೇವಸ್ಥಾನದಲ್ಲಿ 9.09ಕ್ಕೆ ಸರಿಯಾಗಿ ಒಳ ಪ್ರವೇಶಿಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ದೇವಸ್ಥಾನದಲ್ಲಿ ತಂಗಲಿದ್ದು, ಬಳಿಕ ಸುದ್ದಿಗೋಷ್ಠಿ ನಡೆಸಿ, ಕುಕ್ಕೆ ಸುಬ್ರಮಣ್ಯದತ್ತ ಪ್ರಯಾಣ ಮಾಡಲಿದ್ದಾರೆ.
ಈ ಮಧ್ಯೆ, ಬೆಳಗ್ಗೆಯಿಂದಲೇ ಸಾರ್ವಜನಿಕರಿಗೆ ದೇಗುಲ ಪ್ರವೇಶವನ್ನು ತಡೆಹಿಡಿಲಾಗಿದೆ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರು ಶ್ರೀಕ್ಷೇತ್ರದಿಂದ ಹೊರನಡೆದ ಬಳಿಕವಷ್ಟೇ ಭಕ್ತರಿಗೆ ಮಂಜುನಾಥ ಸ್ವಾಮಿ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು ಎಂದು ದೇವಸ್ಥಾನದ ಮೂಲಗಳು ಹೇಳಿವೆ.
Comments
English summary
BS Yeddyurappa dharmasthala darshan has started. District administration has welcomed him officially.
Story first published: Monday, June 27, 2011, 9:22 [IST]