ಯಡಿಯೂರಪ್ಪನವರ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಪ್ರವಾಸ ವಿವರ
ಆಣೆ ಬಿಡಬೇಕೆಂಬ ಬಿಜೆಪಿ ವರಿಷ್ಠರ, ಸ್ವಾಮೀಜಿಗಳ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿರುವ ಯಡಿಯೂರಪ್ಪ ಧರ್ಮಸ್ಥಳಕ್ಕೆ ಸೋಮವಾರ ಜೂ.27ರಂದು ತಲುಪಿ, ಮಂಜುನಾಥನಿಗೆ ಕೈಮುಗಿದು, ಹೆಚ್ಚು ಕಾಲ ಕಳೆಯದೆ ಕುಕ್ಕೆ ಸುಬ್ರಮಣ್ಯಕ್ಕೆ ಪ್ರಯಾಣ ಮುಂದುವರಿಸಲಿದ್ದಾರೆ. ಅಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.
ಧರ್ಮಸ್ಥಳದಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಮುಖಾಮುಖಿಯಾಗಲಿದ್ದಾರಾ? ಇಬ್ಬರೂ ಮಂಜುನಾಥನಿಗೆ ಏನು ಭಿನ್ನಹ ಮಾಡಲಿದ್ದಾರೆ? ಇದು ಸದ್ಯಕ್ಕೆ ಬಹಿರಂಗವಾಗದ ವಿಚಾರ. ಸದ್ಯಕ್ಕೆ ಯಡಿಯೂರಪ್ಪನವರು ಕೆಲ ಆಯ್ದ ಸಚಿವರೊಂದಿಗೆ ಸಿಟಿ ರೈಲು ನಿಲ್ದಾಣದಿಂದ ಕಣ್ಣೂರು ಎಕ್ಸ್ ಪ್ರೆಸ್ ರೈಲು ಮುಖಾಂತರ ಧರ್ಮಸ್ಥಳಕ್ಕೆ ಪ್ರಯಾಣ ಆರಂಭಿಸಿಯಾಗಿದೆ. ನಾಳೆ ಏನಾಗುತ್ತೆ ಕಾದು ನೋಡಿ. ಅಲ್ಲಿಯವರೆಗೆ, ಯಡಿಯೂರಪ್ಪನವರ ಕಾರ್ಯಕ್ರಮದತ್ತ ಕಣ್ಣು ಹಾಯಿಸಿ.
*
ಸಂಜೆ
8.50ಕ್ಕೆ
ಕಣ್ಣೂರು
ಎಕ್ಸ್
ಪ್ರೆಸ್
ರೈಲು
ಬೆಂಗಳೂರು
ನಿಲ್ದಾಣ
ಬಿಟ್ಟಿದೆ.
*
ಬೆಳಿಗ್ಗೆ
6.63ಕ್ಕೆ
ಬೆಳ್ತಂಗಡಿ
ತಾಲೂಕಿನ
ಶ್ರೀ
ಕ್ಷೇತ್ರ
ಧರ್ಮಸ್ಥಳ
ತಲುಪಲಿದೆ.
*
10ಕ್ಕೆ
ಮಂಜುನಾಥನ
ದರ್ಶನ
ಮತ್ತು
ಪೂಜಾ
ಕಾರ್ಯಕ್ರಮ.
*
ಮಧ್ಯಾಹ್ನ
1
ಗಂಟೆಗೆ
ರಸ್ತೆಯ
ಮೂಲಕ
ಕುಕ್ಕೆ
ಸುಬ್ರಮಣ್ಯಕ್ಕೆ
ಪಯಣ.
*
2.05ಕ್ಕೆ
ವಿವಿಧ
ಅಭಿವೃದ್ಧಿ
ಕಾಮಗಾರಿಗಳ
ಶಿಲಾನ್ಯಾಸ.
*
3.30ಕ್ಕೆ
ಕುಕ್ಕೆ
ಸುಬ್ರಮಣ್ಯ
ಸ್ವಾಮಿಗೆ
ವಿಶೇಷ
ಪೂಜೆ.
*
ಸಂಜೆ
5.30ಕ್ಕೆ
ಮಂಗಳೂರು
ವಿಮಾನ
ನಿಲ್ದಾಣ
ತಲುಪಿ
ಅಲ್ಲಿಂದ
ಬೆಂಗಳೂರಿಗೆ
ವಾಪಸ್...