ದೆಹಲಿಯಲ್ಲಿ ಯಡಿಯೂರಪ್ಪ ಮಾನ ಹರಾಜು ಹಾಕಿದ ಎಚ್ಡಿಕೆ
ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ರಾಜ್ಯ ಎಂದು ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ ಅವರು ಹೇಳಿದ್ದಾರೆ. ದೇಶದ ಪ್ರಮುಖ ವಾರಪತ್ರಿಕೆಗಳಲ್ಲೂ ರಾಜ್ಯದ ಮಾನ ಹರಾಜಾಗಿದೆ. ಮುಖ್ಯಮಂತ್ರಿ ವಿರುದ್ಧ ಆರೋಪ ಮಾಡಿದಾಗೆಲ್ಲ ದಾಖಲೆ ಒದಗಿಸುವಂತೆ ಮಾಧ್ಯಮ ಮಿತ್ರರು ಕೇಳುತ್ತಿದ್ದು. ಈಗ ಕಾಲ ಕೂಡಿ ಬಂದಿದೆ.
*
ಬೆಳಗಾವಿ
ಜಿಲ್ಲೆ
ಗೋಕಾಕ
ತಾಲೂಕಿನ
ಯಾದವಾಡದಲ್ಲಿರುವ
ರತ್ನ
ಸಿಮೆಂಟ್
ಕಾರ್ಖಾನೆ
1,417
ಎಕರೆ
ಗಣಿ
ಭೂಮಿ
ನೀಡಿಕೆ.
*
1979
ನಲ್ಲಿ
ಆರಂಭವಾದ
ರತ್ನ
ಸಿಮೆಂಟ್
ಕಾರ್ಖಾನೆ
ನಷ್ಟ
ಹೊಂದಿದಾಗ
ಯಡಿಯೂರಪ್ಪ
ಅವರು
ಸಾಲ
ಮನ್ನಾ
ಮಾಡಿ
ಮೇಲಕ್ಕೆತ್ತಿದರು.
ಕಟ್ಟಾ
ಸುಬ್ರಮಣ್ಯ
ನಾಯ್ಡು
ಅವರಿಗೆ
ಸೇರಿದ
ಈ
ಕಾರ್ಖಾನೆಗೆ
ಬಿಟ್ಟಿ
ಸೌಲಭ್ಯಗಳು
ತಾನಾಗೇ
ಒದಗಿ
ಬಂದಿತು.
*
2006ರಲ್ಲಿ
ಉಪ
ಮುಖ್ಯಮಂತ್ರಿಯಾಗಿದ್ದ
ಬಿಎಸ್
ಯಡಿಯೂರಪ್ಪ
ಅವರು
ನಾಯ್ಡು
ಅವರ
ಕುಟುಂಬದವರಿಗೆ
ಅಕ್ರಮವಾಗಿ
ಗಣಿ
ಗುತ್ತಿಗೆ
ನೀಡಿದ್ದಾರೆ
*
ಕೆಎಸ್
ಐಐಡಿಸಿ,
ರತ್ನ
ಸಿಮೆಂಟ್
ಕಾರ್ಖಾನೆಗೆ
ನೀಡಿದ
20
ತ್ರೈಮಾಸಿಕ
ಕಾಲಾವಧಿಯಲ್ಲಿ
ಸಾಲ
ತೀರಿಸಬೇಕಿತ್ತು.
ಆದರೆ,
ಯಡಿಯೂರಪ್ಪ
ಸಾಲ
ಮನ್ನಾ
ಮಾಡಿದರು.
ನಂತರ
ಕಂಪೆನಿಯನ್ನು
ಸ್ವಾಧೀನ
ಪಡಿಸಿಕೊಂಡರು.
*
4.8
ಕೋಟಿ
ರು
ಸಾಲ
ಹಾಗೂ
7.5
ಕೋಟಿ
ರು
ಬಡ್ಡಿ
ಮನ್ನಾ
ಮಾಡಿದ
ಯಡಿಯೂರಪ್ಪ
ಅವರಿಗೆ
ಕಂಪೆನಿ
ಷೇರುಗಳನ್ನು
ನೀಡಲಾಗಿದೆ.
*
ಎರಡು
ವರ್ಷಗಳಿಂದ
ಬ್ಯಾಲೆನ್ಸ್
ಷೀಟ್
ಸಲ್ಲಿಸದ
ಕೋಲ್ಕತ್ತಾದಲ್ಲಿರುವ
ಇಂದ್ರವೀರ್
ಕುಟೀರ
ಕಂಪೆನಿ.
ಇದು
ಯಡಿಯೂರಪ್ಪ
ಅವರ
ಮಕ್ಕಳ
ಕಂಪೆನಿ.
ಯಡಿಯೂರಪ್ಪ ಹಾಗೂ ಅವರ ಮಕ್ಕಳು ಟ್ರಸ್ಟಿಯಾಗಿರುವ ಪ್ರೇರಣಾ ಟ್ರಸ್ಟ್ ಗೆ 27 ಕೋಟಿ ರು ಹವಾಲಾ ಹಣ ಸಿಕ್ಕಿರುವುದನ್ನು ಬಹಿರಂಗಪಡಿಸಿದ್ದ ಕುಮಾರಸ್ವಾಮಿ, ಇಂದು 80 ಕೋಟಿ ರು ಅಧಿಕ ಅವ್ಯವಹಾರದಲ್ಲಿ ಭಾಗಿಯಾಗಿರುವ ದಾಖಲೆಗಳನ್ನು ಬಿಚ್ಚಿಟ್ಟರು. ದೆಹಲಿಯಲ್ಲಿರುವ ನಾಯಕರು ಯಡಿಯೂರಪ್ಪ ಅವರ ಅಕ್ರಮಕ್ಕೆ ರಕ್ಷಣೆ ನೀಡುತ್ತಿದ್ದಾರೆ. ಕೇಂದ್ರದ ಬಿಜೆಪಿ ನಾಯಕರ ಬ್ಯಾಂಕ್ ಖಾತೆಗಳನ್ನು ಹುಡುಕಿದರೆ ಇನ್ನಷ್ಟು ವಿಷಯ ಹೊರ ಬರಲಿದೆ ಎಂದು ಕುಮಾರಸ್ವಾಮಿ ಹೇಳಿದರು.