ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಸ್ವಿಸ್ ಆಫೀಸ್, ಹೂಡಿಕೆ ಮಾಡಿ

|
Google Oneindia Kannada News

Switzerland
ಬೆಂಗಳೂರು, ಜೂನ್ 18: ಉದ್ಯಾನ ನಗರಿಯಲ್ಲಿ ಪ್ರಧಾನ ರಾಯಭಾರಿ ಕಚೇರಿಯನ್ನು ತೆರೆಯಲು ಸ್ವಿಜರ್ ಲ್ಯಾಂಡ್ ನಿರ್ಧರಿಸಿದೆ. ಬೆಂಗಳೂರಿನಲ್ಲಿ ನಿರ್ಮಿಸಲಿರುವ ನೂತನ ರಾಯಭಾರ ಕಚೇರಿಯು ವಹಿವಾಟು, ಹೂಡಿಕೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ ಎಂದು ಭಾರತದಲ್ಲಿರುವ ಸ್ವಿಜರ್ ಲ್ಯಾಂಡ್ ರಾಯಭಾರಿ ಪಿಲಿಪ್ ವೆಲ್ಟಿ ಹೇಳಿದ್ದಾರೆ.

ಈ ಕನ್ಸೂಲೆಟ್ ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರ, ಕರ್ನಾಟಕ, ಕೇರಳ, ತಮಿಳುನಾಡು, ಪಾಂಡಿಚೇರಿ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ವಹಿವಾಟು ಉಸ್ತುವಾರಿ ನೋಡಿಕೊಳ್ಳಲಿದೆ. ಮುಂದಿನ ವರ್ಷ ಈ ಕಚೇರಿ ಆರಂಭವಾಗುವ ನಿರೀಕ್ಷೆಯಿದೆ. ಅಲ್ಲಿವರೆಗೆ ಈ ಎಲ್ಲಾ ರಾಜ್ಯಗಳಿಗೆ ಮುಂಬೈ ಕೇಂದ್ರದಿಂದಲೇ ಸ್ವಿಜರ್ ಲ್ಯಾಂಡ್ ಸೇವೆ ನೀಡಲಿದೆ.

ಕಪ್ಪು ಹಣ: ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತೀಯರ ಕಪ್ಪು ಹಣದ ವಿಷಯವು ಭಾರತ ಮತ್ತು ಸ್ವಿಜರ್ ಲ್ಯಾಂಡ್ ಸಹಭಾಗಿತ್ವಕ್ಕೆ ತೊಂದರೆಯಾಗದು ಎಂದು ಪಿಲಿಪ್ ವೆಲ್ಟಿ ಹೇಳಿದ್ದಾರೆ. ಕ್ರಿಮಿನಲ್ ಹಣ ಅಥವಾ ಕ್ರಿಮಿನಲ್ ಗಳನ್ನು ರಕ್ಷಿಸಲು ಬ್ಯಾಂಕಿನ ರಹಸ್ಯ ಕಾನೂನಿನಲ್ಲಿ ಅವಕಾಶವಿಲ್ಲ. ಭಾರತ ಸೂಕ್ತ ದಾಖಲೆ ಅಥವಾ ವಿನಂತಿ ಸಲ್ಲಿಸಿದರೆ ಕಪ್ಪು ಹಣದ ಮಾಹಿತಿ ಪಡೆಯಬಹುದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

English summary
Switzerland has set up a consulate general in Bangalore. New consulate will cater to the southern states Andhra Pradesh, Karnataka, Kerala, Tamil Nadu, Puducherry and Andaman and Nicobar Islands. "Indian government will be entitled to get required details based on specific requests" Switzerland's ambassador to India Philippe Welti said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X