ಹೆಂಡತಿಯನ್ನೇ ತ್ಯಾಗ ಮಾಡಿದ ನಿತೀಶ್ ತ್ಯಾಗಿ ಕಥೆ

ಮೀರತ್ ನಲ್ಲಿ ನಡೆದ ಘಟನೆ ಥೇಟ್ ಸಿನಿಮಾದಂತ್ತಿದೆ. ಅವಳ ಹೆಸರು ಆರತಿ. ಆಕೆಯ ಅಕ್ಕನ ಮದುವೆಯ ಖುಷಿಯಲ್ಲಿದ್ದವಳು. ಆದರೆ ಮದುವೆಯಂದೇ ಆಕೆಯ ಅಕ್ಕ ತಾನು ಪ್ರೀತಿಸಿದಾತನೊಂದಿಗೆ ಓಡಿಹೋಗಿದ್ದಳು. ಆದರೆ ಮರ್ಯಾದೆ ಉಳಿಸಲು ಆಕೆಯ ತಂದೆ ತಂಗಿ ಆರತಿಯನ್ನೇ ಉದ್ಯಮಿ ನಿತೀಶ್ ತ್ಯಾಗಿಗೆ ಮದುವೆ ಮಾಡಿಕೊಟ್ಟ.
ಮದುವೆ ಮುಗಿದು ಮನೆಗೆ ಬಂದ ಪತ್ನಿ ನಿತೀಶ್ ನಲ್ಲಿ ತನಗೆ ವಿನೀತ್ ಎಂಬಾತನೊಂದಿಗೆ ಲವ್ ಇರುವುದಾಗಿ ತಿಳಿಸಿದ್ದಾಳೆ. "ಆತನೊಂದಿಗೆ ಈ ಹಿಂದೆಯೇ ದೇವಸ್ಥಾನದಲ್ಲಿ ಮದುವೆಯಾಗಿದೆ. ನನ್ನ ಇಷ್ಟಕ್ಕೆ ವಿರುದ್ಧವಾಗಿ ಈ ಮದುವೆ ಅನಿರೀಕ್ಷಿತವಾಗಿ ನಡೆದಿದೆ. ದಯವಿಟ್ಟು ಆತನೊಂದಿಗೆ ಬದುಕಲು ಅವಕಾಶ ಮಾಡಿಕೊಡಿ" ಎಂದು ಪತಿಯ ಕಾಲಿಡಿದು ಬೇಡಿಕೊಂಡಿದ್ದಾಳೆ.
ನಿತೀಶ್ ಆಕೆಯ ಅಕ್ಕನನ್ನು ಮದುವೆಯಾಗಬೇಕೆಂದುಕೊಂಡಿದ್ದ. ಅಕ್ಕ ಸಿಗಲಿಲ್ಲ. ಸರಿ ತಂಗಿಯಾದರೂ ಸಿಕ್ಕಲಲ್ಲ ಎಂದು ಮದುವೆಗೆ ಒಪ್ಪಿಕೊಂಡಿದ್ದ. ಆದರೆ ಆಕೆಯ ಕತೆ ಹೀಗೆ. ಆದರೂ ಪ್ರೀತಿಸಿದವರನ್ನು ದೂರ ಮಾಡಲು ಆತನ ಮನಸ್ಸು ಒಪ್ಪಲಿಲ್ಲ. ಹೆಸರಿಗೆ ತಕ್ಕಂತೆ ನಿತೀಶ್ ತ್ಯಾಗಿಯಾದ.
ತಾನೇ ಮುಂದೆ ನಿಂತು ಅವರಿಬ್ಬರನ್ನು ಒಂದುಗೂಡಿಸಿದ. ಇವಳು ನನಗೆ ತಂಗಿಯಂತೆ ಎಂದ. ತನ್ನ ಮಗನ ತ್ಯಾಗದ ಕುರಿತು ನಿತೀಶ್ ತಂದೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನಮ್ಮ ಕುಟುಂಬದವರೆಲ್ಲ ಆಕೆಯನ್ನು ಮಗಳಂತೆ ಭಾವಿಸಿದ್ದೇವೆ: ಎಂದು ನಿತೀಶ್ ತಂದೆ ಹೇಳಿದ್ದಾರೆ.
ಆದರೆ ಈ ಘಟನೆ ಆರತಿಯ ತಂದೆಗೆ ಇಷ್ಟವಾಗಲಿಲ್ಲ. "ನನಗೆ ತಂದೆ ಕಿರುಕುಳ ಕೊಡುತ್ತಿದ್ದಾರೆ. ನಿತೀಶ್ ಕುಟುಂಬವನ್ನು ವರದಕ್ಷಿಣೆ ಕಿರುಕುಳದ ಆರೋಪವನ್ನು ಸಿಲುಕಿಸುವುದಾಗಿ ಬೆದರಿಸುತ್ತಿದ್ದಾರೆ" ಎಂದು ಆರತಿ ಹೇಳಿದ್ದಾಳೆ.
ನನಗೆ ತಂದೆಯಿಂದ ರಕ್ಷಣೆ ಕೊಡಿ ಎಂದು ಇದೀಗ ಆರತಿ ಪೊಲೀಸರ ಮೊರೆ ಹೋಗಿದ್ದಾಳೆ. ಇದನ್ನು ಮೀರತ್ ನಗರ ಪೊಲೀಸ್ ಆಯುಕ್ತ ಪ್ರಬಾಲ್ ಪ್ರತಾಪ್ ಸಿಂಗ್ ದೃಢೀಕರಿಸಿದ್ದಾರೆ.
ಅಕ್ಕನ ಮದುವೆಯಾಗಲು ಹೋಗಿ ತಂಗಿಯನ್ನು ಮದುವೆಯಾದ ನಿತೀಶ್ ಕೊನೆಗೆ ಆಕೆಯನ್ನು ತಂಗಿಯಾಗಿ ಸ್ವೀಕರಿಸಿದ. ಆತನ ತಂದೆ ಕೂಡ ಈಕೆಯನ್ನು ಮಗಳು ಎಂದು ಕರೆದ. ಆದರೆ ಆಕೆಯ ನಿಜವಾದ ತಂದೆ ಮಾತ್ರ ಆಕೆಯ ಪಾಲಿಗೆ ವಿಲನ್ ಆಗಿದ್ದಾನೆ. (ಕೃಪೆ: ಮಿಡ್ ಡೇ)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications