ತಮಿಳುಪರ ಆರ್ಚ್ ಬಿಷಪ್ ವಿರುದ್ಧ ಕ್ರೈಸ್ತ ಕನ್ನಡಿಗರ ಕಿಡಿ

ಮಿಲ್ಲರ್ಸ್ ರಸ್ತೆಯಲ್ಲಿರುವ ಮೋರಾಸ್ ಅವರ ಮನೆಯೆದಿರು ಜಮಾಯಿಸಿದ ಕ್ಯಾಥೊಲಿಕ್ ಕನ್ನಡಿಗರು, ಆರ್ಚ್ ಬಿಷಪ್ ಅವರು ಕೊಂಕಣಿ ಮತ್ತು ತಮಿಳು ಮಾತನಾಡುವ ಕ್ರೈಸ್ತರನ್ನು ಮಾತ್ರ ಓಲೈಸುತ್ತಿದ್ದಾರೆ. ಕನ್ನಡಿಗರಿಗೆ ಕವಡೆ ಕಾಸಿನ ಕಿಮ್ಮತ್ತು ಕೂಡ ನೀಡುತ್ತಿಲ್ಲ ಎಂದು ಆರೋಪಿಸಿದರು.
ಜೆಸಿ ರಸ್ತೆಯಲ್ಲಿರುವ ಸೇಂಟ್ ತೆರೆಸಾ ಚರ್ಚ್ ನಲ್ಲಿ ಕನ್ನಡಪರ ಪಾದ್ರಿಯನ್ನೇ ನೇಮಿಸುವ ಪರಿಪಾಠವನ್ನು 1948ರಿಂದ ಜಾರಿಮಾಡಿಕೊಂಡು ಬರಲಾಗಿದೆ. ಆದರೆ, ಈ ಬಾರಿ ಮಾತ್ರ ತಮಿಳುಪರ ಇರುವಂಥ ಪಾದ್ರಿಯನ್ನು ನೇಮಿಸಿರುವುದು ನಿಜಕ್ಕೂ ದುರ್ದೈವ ಎಂದು ಅವರು ಕಿಡಿಕಾರಿದರು.
ಕನ್ನಡ ಭಾಷಿಗರಿಗಾಗಿ ಹೋರಾಟ ಮಾಡುತ್ತಿರುವ ಫ್ರಾನ್ಸಿಸ್ ಥಾಮಸ್ ಅವರನ್ನು ಕನಕಪುರ ರಸ್ತೆಯಲ್ಲಿರುವ ಸಣ್ಣ ಚರ್ಚ್ ಕ್ರಿಸ್ತ ಕರುಣಾಲಯಕ್ಕೆ ಸ್ಥಳಾಂತರಿಸಲಾಗಿದೆ. ಹಾಗೆಯೆ, ಕನ್ನಡಕ್ಕಾಗಿ ಹೋರಾಡುತ್ತಿರುವವರ ಮೇಲೆ ದೌರ್ಜನ್ಯವೆಸಲಾಗುತ್ತಿದೆ. ಇದು ಕೂಡಲೆ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.
ಎಲ್ಲ ಚರ್ಚುಗಳಲ್ಲಿ ಕನ್ನಡದಲ್ಲಿಯೇ ಪ್ರಾರ್ಥನೆ ಸಲ್ಲಿಸುವಂತಾಗಬೇಕು ಮತ್ತು ಮಕ್ಕಳಿಗೆ ವಿದ್ಯಾರ್ಜನೆ ಮಾಡಲೆಂದು ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆಯಬೇಕು. ಕರ್ನಾಟಕದಲ್ಲಿಯೇ ಕನ್ನಡಿಗರಿಗೆ ಅವಕಾಶಗಳನ್ನು ನೀಡದಿದ್ದರೆ ಹೇಗೆ ಎಂದು ಸಾಶಿ ಮರುಳಯ್ಯ ಖಾರವಾಗಿ ಪ್ರಶ್ನಿಸಿದರು.












Click it and Unblock the Notifications