ತಮಿಳುನಾಡಿನಲ್ಲಿ ಬಸ್ ಉರಿದು ಬೂದಿ, 23 ಸಾವು

ಬೆಂಗಳೂರು ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾವೇರಿಪಕ್ಕಂ ಬಳಿಯ ಆವಲೂರಿನಿಂದ ಈ ಘಟನೆ ವರದಿಯಾಗಿದೆ. ಈ ಸ್ಥಳ ವೆಲ್ಲೂರು ನಗರದಿಂದ 40 ಕಿ.ಮೀ ದೂರದಲ್ಲಿದೆ. ಬಸ್ಸಿನ ಡ್ರೈವರ್ ಕಿಟಕಿಯಿಂದ ಹಾರಿ ಘಟನಾ ಸ್ಥಳದಿಂದ ತಪ್ಪಿಸಿಕೊಂಡು ನಂತರ ಪೊಲೀಸರಿಗೆ ಶರಣಾಗಿದ್ದಾನೆ. ಒಬ್ಬ ಪ್ರಯಾಣಿಕ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಗುರುತಿಸಲಾಗದಷ್ಟು ದೇಹಗಳು ಸುಟ್ಟು ಕರಕಲಾಗಿದೆ ಎಂದು ಕಾಂಚೀಪುರಂ ಪೋಲೀಸ್ ಸುಪರಿಂಡೆಂಟ್ ಎಸ್ ಮನೋಹರನ್ ತಿಳಿಸಿದ್ದಾರೆ. ಮೃತರಲ್ಲಿ ಐವರು ಮಹಿಳೆಯರು ಇಬ್ಬರು ಮಕ್ಕಳು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications