ಮಾರನ್ ಬಲಿಗೆ ಕಾದಿರುವ 2ಜಿ ತರಂಗಗಳು
ನವದೆಹಲಿ,
ಜೂ 1: 2ಜಿ ತರಂಗ ಗುಚ್ಛ ಹಂಚಿಕೆ ಅವ್ಯವಹಾರದಿಂದ ಲಾಭ ಪಡೆದ ಕಾರ್ಪೋರೇಟ್ ಧಣಿಗಳು ಹಾಗೂ ಸಚಿವರ ಹೆಸರುಗಳು ಒಂದೊಂದಾಗಿ ಹೊರಕ್ಕೆ ಬರುತ್ತಿದ್ದು, ದಯಾನಿಧಿ ಮಾರನ್ ಹೆಸರನ್ನು ತೆಹೆಲ್ಕಾ ಪತ್ರಿಕೆ ಹೊರ ಹಾಕಿದೆ. ಕಳೆದ 2006ರಲ್ಲಿ ಕೆಲವು ದೂರಸಂಪರ್ಕ ಸಂಸ್ಥೆಗಳಿಗೆ ಪರವಾನಿಗೆ ನೀಡುವುದಕ್ಕೆ ಆಗಿನ ದೂರಸಂಪರ್ಕ ಸಚಿವ ಹಾಗೂ ಹಾಲಿ ಜವಳಿ ಸಚಿವ ದಯಾನಿಧಿ ಮಾರನ್ ವಿಶೇಷ ಒಲವು ತೋರಿಸಿದ್ದಾರೆ ಎಂದು ತೆಹೆಲ್ಕಾ ಆರೋಪಿಸಿದೆ. ಇದಕ್ಕೆ ಉತ್ತರವಾಗಿ ಸ್ಪಷ್ಟನೆ ಕೋರಿ ಪತ್ರಿಕೆಗೆ ಸಚಿವರು ನೋಟಿಸ್ ಕಳುಹಿಸಿದ್ದಾರೆ. id="toptextpromo">'ತೆಹೆಲ್ಕಾ"ದಲ್ಲಿ
ಪ್ರಕಟವಾದ ವರದಿ ಶುದ್ಧ ಸುಳ್ಳು ಹಾಗೂ ತನಿಖೆ ವರದಿಯ ಹೆಸರಿನಲ್ಲಿ ಪ್ರಕಟಿಸಿರುವ ಸುಳ್ಳಿನ ಕಂತೆಯಾಗಿದೆಯೆಂದು ಅವರು ನೋಟಿಸ್ನಲ್ಲಿ ಹೇಳಿದ್ದಾರೆ.ಮಾರನ್ ವಿರುದ್ಧದ ಸುಳ್ಳು ಆರೋಪಗಳ ಮೊತ್ತ ಈ ವರದಿಯಾಗಿದೆಯೆಂದು ನೋಟಿಸ್ನಲ್ಲಿ ಆರೋಪಿಸಲಾಗಿದೆ.ಇದೇ ವೇಳೆ, ಮಾಜಿ ಟೆಲಿಕಾಂ ಸಚಿವರು ನೀಡಿರುವ ನೋಟಿಸ್ ಇದುವರೆಗೆ ತನ್ನ ಕೈಸೇರಿಲ್ಲವೆಂದು 'ತೆಹೆಲ್ಕಾ" ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಡಿಎಂಕೆ
ಸುತ್ತಿಕೊಳ್ಳುತ್ತಿರುವ 2ಜಿ: ಎ ರಾಜಾ, ಕನಿಮೋಳಿ ನಂತರ ಹಾಲಿ ಸಚಿವ ದಯಾನಿಧಿ ಮಾರನ್ ಮೇಲೆ ಆರೋಪಗಳು ಕೇಳಿ ಬರುತ್ತಿದೆ. ಎಂ ಕರುಣಾನಿಧಿ ಅವರ ಕುಟುಂಬಕ್ಕೆ 2ಜಿ ಹಗರಣ ಎಡಬಿಡದೆ ಕಾಡುತ್ತಿದೆ. ಆದರೆ, ಮಿತ್ರ ಪಕ್ಷ ಕಾಂಗ್ರೆಸ್ ಮಾತ್ರ ಈ ಬಗ್ಗೆ ಮೌನ ವಹಿಸಿದ್ದು, ಮಾರನ್ ಮೇಲಿನ ಆರೋಪದ ಬಗ್ಗೆ ಕಾಂಗ್ರೆಸ್ ಯಾವುದೇ ಸ್ಪಷ್ಟನೆ ನೀಡುವ ಅಗತ್ಯವಿಲ್ಲ ಎಂದು ವಕ್ತಾರ ಮನೀಶ್ ತಿವಾರಿ ಹೇಳಿದ್ದಾರೆ. ಸನ್ ನೆಟ್ ವರ್ಕ್ಸ್ ಹಾಗೂ ಮ್ಯಾಕ್ಸಿಸ್ ನ ಅಧಿಕಾರಿಗಳಿಗೂ ಕೂಡಾ 2ಜಿ ಬಿಸಿ ಶೀಘ್ರದಲ್ಲೇ ಮುಟ್ಟುವ ಸಾಧ್ಯತೆಯಿದೆ.











Click it and Unblock the Notifications